Posts Slider

Karnataka Voice

Latest Kannada News

ಸಿಪಿಐ ಶ್ರೀಧರ ಸತಾರೆ ಅಮಾನತ್ತು: ಗ್ರಾಮೀಣ ಪೊಲೀಸ್ ಠಾಣೆಯೆದುರು ಹೋರಾಟ…

1 min read
Spread the love

ಧಾರವಾಡ: ಸಭಾಪತಿ ಬಸವರಾಜ ಹೊರಟ್ಟಿಯವರ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಕುತಂತ್ರದಿಂದ ದಕ್ಷ ಅಧಿಕಾರಿಯನ್ನ ಅಮಾನತ್ತು ಮಾಡಲಾಗಿದೆ ಎಂದು ದಲಿತ ಮುಖಂಡರು ಗ್ರಾಮೀಣ ಪೊಲೀಸ್ ಠಾಣೆ ಮುಂಭಾಗದಲ್ಲಿ ಹೋರಾಟ ನಡೆಸಿದರು.

ಶ್ರೀಧರ ಸತಾರೆ ಓರ್ವ ಉತ್ತಮ ಅಧಿಕಾರಿ. ಅವರನ್ನ ಉದ್ದೇಶಪೂರ್ವಕವಾಗಿ ಅಮಾನತ್ತು ಮಾಡಲಾಗಿದೆ. ಈ ಆದೇಶವನ್ನ ಹಿಂದೆ ಪಡೆಯದೇ ಹೋದರೇ ಹೋರಾಟವನ್ನ ತೀವ್ರಗೊಳಿಸಲಾಗುವುದೆಂದು ಪ್ರತಿಭಟನಾನಿರತರು ಎಚ್ಚರಿಕೆ ನೀಡಿದರು.

ಹೋರಾಟದ ವೀಡಿಯೋ ಇಲ್ಲಿದೆ ನೋಡಿ..

ನಾಳೆ ಜಿಲ್ಲಾಧಿಕಾರಿಗೂ ಮನವಿಯನ್ನ ಕೊಟ್ಟು, 7 ದಿನದ ಸಮಯವನ್ನ ನೀಡುತ್ತೇವೆ. ಅಮಾನತ್ತು ಹಿಂದೆ ಪಡೆಯದೇ ಹೋದರೇ ಹೋರಾಟವನ್ನ ತೀವ್ರಗೊಳಿಸಲಾಗುವುದೆಂದು ಹೇಳಿದರು.

ಮಹಾದೇವ ದೊಡ್ಡಮನಿ, ಲಕ್ಷ್ಮಣ ಬಕ್ಕಾಯಿ, ಲಕ್ಷ್ಮಣ ಈ. ದೊಡ್ಡಮನಿ.  ನಿಂಗಣ್ಣ ಅದರಖoಡಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.


Spread the love

Leave a Reply

Your email address will not be published. Required fields are marked *