Posts Slider

Karnataka Voice

Latest Kannada News

ಉತ್ತರಾಖಂಡದ “ಗೆಲುವಿನ ಸೂತ್ರದಾರ” ಪ್ರಲ್ಹಾದ ಜೋಶಿ ನಾಳೆ ಹುಬ್ಬಳ್ಳಿಗೆ- ಭವ್ಯ ಸ್ವಾಗತಕ್ಕೆ ಕಮಲ ಪಡೆ ಸಜ್ಜು…

1 min read
Spread the love

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಅಭೂತಪೂರ್ವ ಜಯಕ್ಕೆ ಕಾರಣವಾದ ಉತ್ತರಾಖಂಡದ ಉಸ್ತುವಾರಿಯಾಗಿದ್ದ ಕೇಂದ್ರ ಸಚಿವ ರವಿವಾರ ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ಕಾರ್ಯಕರ್ತರು ಭವ್ಯ ಸ್ವಾಗತಕ್ಕೆ ಸಜ್ಜಾಗಿದ್ದಾರೆ.

ಕಾರ್ಯಕರ್ತರಿಗೆ ಮಾಡಿಕೊಂಡ ಮನವಿ

ವಿಜಯದ ರೂವಾರಿಗಳಿಗೆ ಭವ್ಯ ಸ್ವಾಗತ
ಉತ್ತರಾಖಂಡ ರಾಜ್ಯದ ಉಸ್ತುವಾರಿಯಾಗಿ ಭಾರತೀಯ ಜನತಾ ಪಕ್ಷದ ಅಭೂತಪೂರ್ವ ವಿಜಯದ ರೂವಾರಿಗಳಾದ ನಮ್ಮ ನೆಚ್ಚಿನ ನಾಯಕರಾದ ಕೇಂದ್ರ ಸಂಸದೀಯ ವ್ಯವಹಾರಗಳ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವರಾದ ಶ್ರೀ ಪ್ರಲ್ಹಾದ ಜೋಶಿಯವರು
ನಾಳೆ ಬೆಳಿಗ್ಗೆ 9.00 ಗಂಟೆಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು.
ಇವರನ್ನು ಪಕ್ಷದ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲು ಬೈಕ್ ರ್ಯಾಲಿ (Bike rally)ಹಾಗೂ ಪ್ರಮುಖ ವೃತ್ತಗಳಲ್ಲಿ ಸ್ವಾಗತದ ಮೂಲಕ ಬರಮಾಡಿಕೊಳ್ಳಲಾಗುವುದು.
ಈ ಸಮಯದಲ್ಲಿ ಪಕ್ಷದ ಎಲ್ಲ ಅಭಿಮಾನಿಗಳು,ಪಾಲಿಕೆ ಸದಸ್ಯರು ಹಿತೈಷಿಗಳು, ಕಾರ್ಯಕರ್ತರು, ಪ್ರಮುಖರು ಹಾಗೂ ಪದಾಧಿಕಾರಿಗಳು ಭಾಗವಹಿಸಲು ವಿನಂತಿ

ಶ್ರೀ ಸಂತೋಷ ಚವ್ಹಾ಼ಣ
ಅಧ್ಯಕ್ಷರು
ಹು ಧಾ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರ
ಪ್ರಧಾನ ಕಾರ್ಯದರ್ಶಿಗಳು
ಶ್ರೀ ಗೋಪಾಲ ಬದ್ದಿ
ಶ್ರೀ ವಿರೂಪಾಕ್ಷ ರಾಯನಗೌಡರ


Spread the love

Leave a Reply

Your email address will not be published. Required fields are marked *