ಕೊರೋನಾ ಪಾಸಿಟಿವ್ ಆದವರನ್ನ ಕರೆಯಿಸಿ ಹೊರಟ್ಟಿಯವರ ವಿರುದ್ಧ “ಎಫ್ಐಆರ್” ಮಾಡಿಸಿದ್ಯಾರು….!

ಧಾರವಾಡ: ಸರ್ವೋದಯ ಶಿಕ್ಷಣ ಸಂಸ್ಥೆಯ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯ ಸಭಾಪತಿ ಬಸವರಾಜ ಹೊರಟ್ಟಿಯವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲು ಕೊರೋನಾ ಪಾಸಿಟಿವ್ ಆಗಿದ್ದ ಇನ್ಸಪೆಕ್ಟರ್ ಅವರನ್ನ ಕರೆದು, ಅವರನ್ನೇ ಅಮಾನತ್ತು ಮಾಡಿಸಲು ಮುಂದಾಗಿದ್ದು ಯಾರೂ ಎಂಬ ಪ್ರಶ್ನೆ ಪೊಲೀಸ್ ವಲಯದಲ್ಲಿ ಕೇಳಿ ಬರುತ್ತಿದೆ.

ಧಾರವಾಡ ತಾಲೂಕಿನ ಮುಗದ ಗ್ರಾಮದ ಬಳಿ ಸರ್ವೋದಯ ಶಿಕ್ಷಣ ಸಂಸ್ಥೆಯ ಸಂಬಂಧ ಜನೇವರಿ 25ರಂದು ದಾಂಧಲೆ ನಡೆದಿತ್ತು. ಇದೇ ಪ್ರಕರಣದಲ್ಲಿ ಸಭಾಪತಿ ಬಸವರಾಜ ಹೊರಟ್ಟಿಯವರ ಮೇಲೆಯೂ ಪ್ರಕರಣ ದಾಖಲು ಮಾಡಲಾಗಿತ್ತು.
ಅಸಲಿಗೆ ಅದೇ ದಿನ ಘಟನೆ ನಡೆದಾಗ ಇನ್ಸಪೆಕ್ಟರ್ ಪಾಟೀಲ ಅವರು ಸ್ಥಳಕ್ಕೆ ಹೋಗಿ ಬಂದಿದ್ದರು. ಆದರೆ, ತಡರಾತ್ರಿ ಹಿರಿಯ ಅಧಿಕಾರಿಗಳು ಕೊರೋನಾದಿಂದ ಬಳಲುತ್ತಿದ್ದ ಇನ್ಸಪೆಕ್ಟರ್ ಶ್ರೀಧರ ಸತಾರೆ ಅವರನ್ನ ಕಚೇರಿಗೆ ಕರೆಯಿಸಿ ಎಫ್ಐಆರ್ ಆಗುವಂತೆ ನೋಡಿಕೊಂಡಿದ್ದಾರೆ.

ಸೋಜಿಗವೆಂದರೇ, “ಕಾಡು ದೇವರ ಕಾಟಾ ಕಳದಂಗ” ಎಫ್ಐಆರ್ ದಾಖಲಾಗಲು ಕಾರಣವಾದ ಹಿರಿಯ ಅಧಿಕಾರಿಗಳು ಮತ್ತೆ ಬಚಾವ್ ಆಗಿ, ಇನ್ಸಪೆಕ್ಟರ್ ಶ್ರೀಧರ ಸತಾರೆ ಅವರನ್ನ ಅಮಾನತ್ತು ಮಾಡಿಸಲಾಗಿದೆ. ಇದು ಪೊಲೀಸ್ ಇಲಾಖೆಯಲ್ಲೂ ನಡೆಯುತ್ತೆ.