ಸಾರ್ವಜನಿಕರಿಂದ ತಾತ್ಸಾರಕ್ಕೆ ಒಳಗಾದವರಿಗೆ “ರಜತ ಸಂಭ್ರಮ” ಗೌರವ…!

ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ “ರಜತ ಸಂಭ್ರಮ” ಆರಂಭಿಸಿದ್ದು, ಅದೀಗ ಜನಮನ್ನಣೆ ಗಳಿಸುತ್ತಿದೆ.
ಸಾರ್ವಜನಿಕ ವಲಯದಲ್ಲಿ ತಾತ್ಸಾರಕ್ಕೆ ಒಳಗಾದ ಲಿಂಗತ್ವ ಅಲ್ಪಸಂಖ್ಯಾತರಿಗೆ ವಿನೂತನವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ ರಜತ ಉಳ್ಳಾಗಡ್ಡಿಮಠ ಅವರು, ಎಲ್ಲರ ಪ್ರೀತಿಗೆ ಕಾರಣವಾಗುತ್ತಿದ್ದಾರೆ. ಕಾರ್ಯಕ್ರಮದ ವಿವರವಾದ ವೀಡಿಯೋ ಇಲ್ಲಿದೆ ನೋಡಿ.
ಪ್ರತಿ ದಿನವೂ ಬೇರೆ ಬೇರೆ ಭಾಗದಲ್ಲಿ ಕೊರೋನಾದಲ್ಲಿ ಜನರಿಗಾಗಿ ಶ್ರಮಿಸಿದವರಿಗೆ ರಜತ ಉಳ್ಳಾಗಡ್ಡಿಮಠ ಗುರುತಿಸಿ, ಅವರಿಗೆ ಗೌರವ ನೀಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ.