Posts Slider

Karnataka Voice

Latest Kannada News

ಕ್ಯಾರಕಟ್ಟಿ ಸೋಲಿಸಿದ್ದ ‘ಚೇತನ ಹಿರೇಕೆರೂರ’ ಕಾಂಗ್ರೆಸ್ ಸೇರ್ಪಡೆ- ಸೋತಿದ್ದ ಕ್ಯಾರಕಟ್ಟಿ ಬಿಜೆಪಿ ಸೇರ್ಪಡೆ…

1 min read
Spread the love

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಾಂಗ್ರೆಸ್ ನ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿಯವರನ್ನ ಸೋಲಿಸಿದ್ದ ಪಕ್ಷೇತರ ಅಭ್ಯರ್ಥಿ ಚೇತನ ಹಿರೇಕೆರೂರ ಕಾಂಗ್ರೆಸ್ ಪಕ್ಷವನ್ನ ಅಧಿಕೃತವಾಗಿ ಸೇರಿದ್ದಾರೆ.

ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ಉಮೇಶ ಧುಷಿ ಅವರಿಗಿಂತ ಕಡಿಮೆ ಮತ ಪಡೆದಿದ್ದ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿಯವರನ್ನ ಬಿಜೆಪಿಗೆ ಸೇರಿಸಿಕೊಳ್ಳುತ್ತಿರುವುದು ರಾಜಕೀಯ ಸ್ಟಂಟ್ ಆಗಿದೆ ಎನ್ನುತ್ತಿರುವಾಗಲೇ ಚೇತನ ಕಾಂಗ್ರೆಸ್ ಸೇರಿದ್ದಾರೆ.

ಪ್ರಕಾಶ ಕ್ಯಾರಕಟ್ಟಿಯವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಇಂತಹ ತೀರ್ಮಾನ ತೆಗೆದುಕೊಂಡಿದ್ದಾರೆಂದು ಹೇಳಲಾಗಿದೆ. ಒಟ್ಟಾರೆ, ಹುಬ್ಬಳ್ಳಿಯಲ್ಲೀಗ ಪಕ್ಷಾಂತರ ಪರ್ವ ಶುರುವಾಗಿದೆ.


Spread the love

Leave a Reply

Your email address will not be published. Required fields are marked *