Posts Slider

Karnataka Voice

Latest Kannada News

ಪೀಠಾರೋಹಣದ ವೇದಿಕೆಯಲ್ಲಿ “ಮುರುಗೇಶ ನಿರಾಣಿ-ಸಿಎಂ” ಆಗ್ತಾರೆ ಎಂದ ಮಹಾಸ್ವಾಮಿಗಳು…!

Spread the love

ಜಮಖಂಡಿ: ಸಚಿವ ಮುರುಗೇಶ ನಿರಾಣಿಯವರು ಬಸವರಾಜ ಬೊಮ್ಮಾಯಿಯವರ ಅವಧಿ ಮುಗಿದ ನಂತರ ಮುಖ್ಯಮಂತ್ರಿಗಳು ಆಗ್ತಾರೆ ಎಂದು ಪಂಚಮಸಾಲಿ ಮೂರನೇಯ ಪೀಠಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುರಪುರ ಸಾರಂಗ ದೇಶಿಕೇಂದ್ರ ಶಿವಾಚಾರ್ಯ ಸುಲಫಲ ಮಠದ ಸ್ವಾಮೀಜಿ  ಹೇಳಿದರು.

ನಿರಾಣಿ ಯಾವುದರಲ್ಲೂ ಇರದ ಮನುಷ್ಯ. ನಿರಾಣಿ ಅಂದ್ರೆ ಕಲ್ಲುಸಕ್ಕರೆ ಇದ್ದಂಗೆ. ಬೊಮ್ಮಾಯಿ ಸರ್ಕಾರದ ಬಳಿಕ ನಿರಾಣಿ ಮುಖ್ಯಮಂತ್ರಿ ಆಗುತ್ತಾರೆ. ಬೊಮ್ಮಾಯಿ ಆಡಳಿತ ಇನ್ನೂ 12 ತಿಂಗಳು ಇದೆ. ಅವರ ಅವಧಿ ಬಳಿಕ ನಿರಾಣಿ ಮುಂದಿನ ಮುಖ್ಯಮಂತ್ರಿ ಆಗ್ತಾರೆ ಎಂದರು.

ಯಾರು ಯಾರು ಏನು ಮಾತಾಡಿದ್ರು.. ಇಲ್ಲಿದೆ ನೋಡಿ ವೀಡಿಯೋ..

ಮುರುಗೇಶ್ ನಿರಾಣಿ ಮುಂದಿನ ಮುಖ್ಯಮಂತ್ರಿ ಆಗಿ ಬರ್ತಾರೆ. ಸರ್ಕಸ್ ಮಾಡುವ ಮಂತ್ರಿ ನಿರಾಣಿ ಅಲ್ಲ. ಒಬ್ಬ ರಾಜಕೀಯವಾಗಿ ಎದ್ದರೆ ಒತ್ತವರು ಬಹಳ ಜನ. ಎಷ್ಟೋ ಮಂದಿ ನಿರಾಣಿಯವರಿಗೆ ಏನೇನೋ ಹೇಳ್ತಾರೆ. ಪಂಚಮಸಾಲಿ ಸಮಾಜ ಎತ್ತಿ ಕೊಟ್ಟಿದ್ದಕ್ಕೆ ಅವರು ಈಗ ಮಂತ್ರಿ ಆಗಿದ್ದಾರೆ. ಮುಂದಿನ ದಿನಗಳಲ್ಲಿ ನೀವು ಸಿಎಂ ಆಗೇ ಆಗ್ತೀರಿ ಎಂದು ವೇದಿಕೆಯಲ್ಲಿ ಸ್ವಾಮೀಜಿ ಹೇಳಿದ್ರು.


Spread the love

Leave a Reply

Your email address will not be published. Required fields are marked *