ಧಾರವಾಡದಲ್ಲಿ “ಗೂಂಡಾಗಿರಿ”- ಎಸಿಪಿ ಅನುಷಾ ಅವರೇ ಇಷ್ಟೊಂದು ಖುಲ್ಲಂ ಖುಲ್ಲಾಂ… “ರೌಡಿಸಂ”

ಧಾರವಾಡ: ನಗರದ ಮುರುಘಾಮಠದ ಬಳಿಯಲ್ಲಿ ಹಾಡುಹಗಲೇ ಗೂಂಡಾಗಳ ಗುಂಪೊಂದು ಮನೆಗೆ ನುಗ್ಗಿ ವ್ಯಕ್ತಿಯೋರ್ವನನ್ನ ಹಿಗ್ಗಾ ಮುಗ್ಗಾ ಥಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸುರೇಶ ಹೊಸೂರು ಎಂಬುವವರ ಮನೆಗೆ ನುಗ್ಗಿರುವ ಪ್ರಕಾಶ ಹೊಸೂರು, ವಿನಯ ಹೊಸೂರು ಸೇರಿದಂತೆ ಏಳು ಜನರು, ಮನ ಬಂದಂತೆ ಥಳಿಸಿರುವ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.
ಆಸ್ತಿಯ ವಿಷಯವಾಗಿ ಮನೆಗೆ ನುಗ್ಗಿರುವ ಗೂಂಡಾಗಳ ಪಡೆ. ಮನೆಯೊಳಗೆ ಒದ್ದು ಹೊರಗೆ ತಂದು ಹಿಗ್ಗಾ ಮುಗ್ಗಾ ಥಳಿಸಲಾಗಿದೆ. ಧಾರವಾಡದಲ್ಲಿ ಎಸಿಪಿ ಅನುಷಾ ಅವರು ಇಂತಹ ಘಟನೆಗಳ ಬಗ್ಗೆ ಜಾಗೃತೆ ವಹಿಸಬೇಕಾಗಿದೆ.
ಹಾಡುಹಗಲೇ ಗೂಂಡಾಗಳು ಬಂದು ಹೊಡೆದು ಹೋಗುತ್ತಾರೆ ಎಂದರೇ ಅವರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎನ್ನೋದು ಪ್ರಜ್ಞಾವಂತರ ಮಾತಾಗಿದೆ.