ರಾಜ್ಯದಲ್ಲಿ ನಾಳೆಯಿಂದ 3 ದಿನ ಹೈಸ್ಕೂಲ್-ಕಾಲೇಜುಗಳಿಗೆ ರಜೆ ಘೋಷಣೆ…

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್ ಮತ್ತು ಕೇಸರಿ ಶಾಲು ಸಮಸ್ಯೆಯಿಂದ ದೂರು ಉಳಿಯಲು ಸರಕಾರ ಮೂರು ದಿನಗಳವರೆಗೆ ಶಾಲೆ-ಕಾಲೇಜುಗಳಿಗೆ ರಜೆಯನ್ನ ಘೋಷಣೆ ಮಾಡಿದೆ.

ಹಿಜಾಬ್ ಬಗ್ಗೆ ಕೋರ್ಟಗೆ ಹೋದ ಹಿನ್ನೆಲೆಯಲ್ಲಿಹಲವು ಗೊಂದಲಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮವನ್ನ ತೆಗೆದುಕೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿದರು.
ಹಿಜಾಬ್ ವಿಷಯಕ್ಕೆ ಸಂಬಂಧಿಸಿದ ಹಾಗೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿವಾದ ಸೃಷ್ಠಿಯಾಗಿದ್ದು, ಇಂದು ಎರಡ್ಮೂರು ಜಿಲ್ಲೆಗಳಲ್ಲಿ ಪ್ರಕರಣ ಬೇರೆಯದ್ದೆ ಸ್ವರೂಪ ಪಡೆಯುತ್ತಿದೆ.
ಹಿಜಾಬ್ ವಿಷಯಕ್ಕೆ ಸಂಬಂಧಿಸಿದ ಹಾಗೇ ನ್ಯಾಯಾಲಯ ವಿಚಾರಣೆಯನ್ನ ನಾಳೆಗೆ ಮಧ್ಯಾಹ್ನ ಮುಂದೂಡಲಾಗಿದೆ.