Posts Slider

Karnataka Voice

Latest Kannada News

ಕಲಘಟಗಿ ಬಳಿ ದುರಂತ: ಇಬ್ಬರು ಧಾರವಾಡಿಗರು ದುರ್ಮರಣ…!

Spread the love

ಧಾರವಾಡ: ಜಿಲ್ಲಾಸ್ಪತ್ರೆಯಲ್ಲಿ ಸ್ಟಾಫ್ ನರ್ಸ ಆಗಿ ಕೆಲಸಮಾಡಿಕೊಂಡಿದ್ದ ಇಬ್ಬರು ಸಿಬ್ಬಂದಿಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ರಜೆ ಇದ್ದ ಕಾರಣ ತಮ್ಮದೇ ಅಂವೇಜರ್ ಬೈಕನಲ್ಲಿ ಗೋವಾಕ್ಕೆ ಹೋಗಿದ್ದರು ಇಬ್ಬರು ಸ್ನೇಹಿತರು.

ಗೋವಾ ಪ್ರವಾಸ ಮುಗಿಸಿಕೊಂಡು ವಾಪಸ್ ಬರುವಾಗ ಕಲಘಟಗಿ ಸಮೀಪದ ಕಾರವಾರ ರಸ್ತೆಯಲ್ಲಿರುವ ದೇವಿಕೊಪ್ಪ ಕ್ರಾಸ್ ಬಳಿ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಜಿಲ್ಲಾ ಆಸ್ಪತ್ರೆ ಸಿಬ್ಬಂದಿಗಳಾದ ನೂರ ಅಹ್ಮದ ಹಾಗೂ ಜಾವೇದ ಪಠಾಣ ಮೃತರಾಗಿದ್ದು, ಕಲಘಟಗಿ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಒತ್ತಡದ ನಡುವೆಯೂ ಎಲ್ಲರೊಂದಿಗೆ ನಗುಮೊಗದಿಂದಲೇ ಮಾತನಾಡುತ್ತಿದ್ದ ಇಬ್ಬರ ಅಗಲಿಕೆ ಸಿಬ್ಬಂದಿಗೆ ಬರಸಿಡಿಲು ಬಡದಂತೆ ಆಗಿದೆ.

ತಮ್ಮ ದೇಹದ ತೂಕ ಇಳಿಸಿಕೊಂಡು ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ನೂರ ಅಹ್ಮದ ಅವರು ಇತ್ತೀಚಿಗೆ 2-3ವರ್ಷದ ಹಿಂದೆಯಷ್ಟೇ ಸಾಧನೆ ಮಾಡಿ, ಎಲ್ಲರಿಗೂ ಮಾದರಿ ವ್ಯಕ್ತಿಯಾಗಿದ್ದರು. ಇನ್ನು ಇಬ್ಬರು ಸಿಬ್ಬಂದಿಯ ಕುಟುಂಬಸ್ಥರಿಗೂ ಮಾಹಿತಿ ತಿಳಿಸಲಾಗಿದೆ.

ಜಿಲ್ಲಾಸ್ಪತ್ರೆ ಸಿಬ್ಬಂದಿ, ಆತ್ಮೀಯರು, ಹಾಗೂ ಒಡನಾಡಿಗಳಾದವರು ಇಬ್ಬರು‌ ಮೃತರ ಕುಟುಂಬಕ್ಕೆ
ದೇವರು ದು:ಖ ಭರಿಸುವ ಶಕ್ತಿ ಕೊಡಲೆಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.‌

ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಧಾರವಾಡ ನಿಜಾಮುದ್ದೀನ ಕಾಲನಿಯ ನಿವಾಸಿ ನೂರ ಅಹ್ಮದ ಬೆಳಗಾವಿ ಹಾಗೂ ಮೊಹ್ಮದ ಶರೀಫ ಎಂಬುವವರು ಘಟನೆಯಲ್ಲಿ ಸಾವಿಗೀಡಾಗಿದ್ದಾರೆ.

ವೇಗವಾಗಿ ಬರುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದಲೇ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಕಲಘಟಗಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *