ಹುಬ್ಬಳ್ಳಿಯಲ್ಲಿ “ಕೆಟಿಎಂ ಬೈಕ್” ಹಾವಳಿ: ಪೊಲೀಸರಿಗೆ ಆಗ್ರಹಿಸಿದ ಆರ್.ಲಕ್ಷ್ಮಣ..
1 min readಹುಬ್ಬಳ್ಳಿ: ಶ್ರೀಮಂತರ ಮಕ್ಕಳ ಕೆಟಿಎಂ ಬೈಕ್ ಹಾವಳಿಯಿಂದ ಪಾದಚಾರಿಗಳು ಕಂಗಾಲಾಗುವ ಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಪೊಲೀಸ್ ಕಮೀಷನರ್ ತಕ್ಷಣವೇ ಕ್ರಮ ಜರುಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಆರ್.ಲಕ್ಷ್ಮಣ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯ ವಿದ್ಯಾನಗರದಲ್ಲಿಂದು ಕೆಟಿಎಂ ಬೈಕ್ ಸವಾರನ ಉಪಟಳದಿಂದ ಬೇಸತ್ತು ಅವರು, ಅಲ್ಲಿಯೇ ವೀಡಿಯೋಂದನ್ನ ಮಾಡಿದ್ದು, ಅದು ಇಲ್ಲಿದೆ ನೋಡಿ.
ಇಂತಹ ಬೈಕ್ ಸವಾರರಿಂದ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಪೊಲೀಸರು ತಕ್ಷಣವೇ ಕ್ರಮವನ್ನ ಜರುಗಿಸಬೇಕೆಂದು ಲಕ್ಷ್ಮಣ ಅವರು ಒತ್ತಾಯಿಸಿದ್ದಾರೆ.