Posts Slider

Karnataka Voice

Latest Kannada News

ಬಸವಕಲ್ಯಾಣದಲ್ಲಿ ಸಚಿವ ಶಂಕರ ಪಾಟೀಲಮುನೇನಕೊಪ್ಪ…!

Spread the love

ಬೀದರ: ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿರುವ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಬಸವಕಲ್ಯಾಣದಲ್ಲಿ ಆತ್ಮೀಯವಾದ ಸ್ವಾಗತ ಕೋರಲಾಯಿತು.

ಶಾಸಕ ಸಲಗಾರ ಸೇರಿದಂತೆ ಹಲವರು ಬಸವನ ನಾಡಿನಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಸತ್ಕರಿಸಿದರು.

ಬೀದರ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ತಾವು ಕಾರ್ಯನಿರ್ವಹಿಸುವುದಾಗಿ ಹೇಳಿದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲೆಯ ಪ್ರತಿಯೊಬ್ಬರ ಸಹಕಾರವನ್ನ ಕೋರಿದರು.

ಬಸವಕಲ್ಯಾಣ ನಗರಕ್ಕೆ ಪ್ರಪ್ರಥಮವಾಗಿ ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಸಚಿವ ಶಂಕರ ಬಿ ಪಾಟೀಲ್ ಮುನೇನ್ ಕೊಪ್ಪ ಭೇಟಿ….

ಬಸವಕಲ್ಯಾಣ ನಗರದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಮಾಡಿದ ಸಚಿವರು…

ನಂತರ ಡಾ.ಚನ್ನ ಬಸವ ಪಟ್ಟದೇವರು ನಿರ್ಮಾಣ ಮಾಡಿದ ಅನುಭವ ಮಂಟಪಕ್ಕೆ ಭೇಟಿ…

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಪೂರ್ವಜನ್ಮದ ಪುಣ್ಯ ಫಲದಿಂದ ಇಲ್ಲಿಗೆ ಬಂದಿದ್ದೆನೆ. ಬೇಗನೆ ಅನುಭವ ಮಂಟಪ ನಿರ್ಮಾಣ ಮಾಡಲಿದ್ದೆವೆ. ಅಂದ ಸಚಿವರು 2021-22ರ ಕಬ್ವಿನ ಬಾಕಿ ವಸೂಲಿ ಮಾಡಿ ರೈತರಿಗೆ ಕಬ್ಬಿನ ಬಾಕಿ ಕೊಡಿಸುವ ಕಾರ್ಯ ಮಾಡಿಲಿದ್ದೆವೆ ಅಂತ ಸಚಿವರ ಹೇಳಿಕೆ…

ನಂತರ ಬಸವಕಲ್ಯಾಣ ಅನುಭವ ಮಂಟಪದಲ್ಲಿ ಸಚಿವರಿಗೆ ಸನ್ಮಾನ..

ಈ ಸಂದರ್ಭದಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ, ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟ ದೇವರು,ಬಿಜೆಪಿ ಮುಖಂಡರಾದ ಶೈಲೆಂದ್ರ ಬೆಲ್ದಾಳೆ,ಜಿಲ್ಲಾಧಿಕಾರಿ ರಾಮಚಂದ್ರನ್ ಆರ್,ಎಸ್ಪಿ ಕಿಶೋರ್ ಬಾಬು ಸೇರಿದಂತೆ ಹಲವರ ಉಪಸ್ಥಿತಿ..


Spread the love

Leave a Reply

Your email address will not be published. Required fields are marked *