ಮೋದಿ ನಾಡಲ್ಲಿ ಕಾಂಗ್ರೆಸ್ ಬೆಳೆಸಲು “ಕನ್ನಡಿಗ ಶಾಕೀರ ಸನದಿ” ನೇಮಕ…!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮೂಲ ಸ್ಥಾನವಾಗಿರುವ ಗುಜರಾತಿನಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಕರ್ನಾಟಕದಿಂದ ಕನ್ನಡಿಗ ಶಾಕೀರ ಸನದಿಯವರನ್ನ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಕಾಂಗ್ರೆಸ್ ಪಕ್ಷದ ವತಿಯಿಂದ ಪಕ್ಷ ಸಂಘಟನೆಯ ಹಿನ್ನೆಲೆ ರಾಷ್ಟ್ರಾದ್ಯಂತ ನಡೆಯುತ್ತಿರುವ ಸಂಘಟನೆಯ ಚುನಾವಣೆ ಭಾಗವಾಗಿ ಗುಜರಾತ್ ರಾಜ್ಯದ ಕಾಂಗ್ರೆಸ್ ಪಕ್ಷದ ಪ್ರದೇಶ ಸಹಾಯಕ ಚುನಾವಣಾಧಿಕಾರಿಯನ್ನಾಗಿ (APRO) ಕರ್ನಾಟಕ ಮೂಲದ ಎ.ಐ.ಸಿ.ಸಿ ಸದಸ್ಯ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಶಾಕೀರ್ ಸನದಿಯವರನ್ನ ನೇಮಕ ಮಾಡಿ ಮಧುಸುಧನ್ ಮೇಸ್ತ್ರಿ ಅವರು ಆದೇಶ ಹೊರಡಿಸಿದ್ದಾರೆ.
ಮೂಲತಃ ಹುಬ್ಬಳ್ಳಿಯವರಾಗಿರುವ ಶಾಕೀರ ಸನದಿಯವರು ರಾಹುಲ ಗಾಂಧಿ ವಲಯದಲ್ಲಿ ಮೊದಲಿಂದಲೂ ಗುರುತಿಸಿಕೊಂಡು ಬಂದವರಾಗಿದ್ದು, ಈಗ ಈ ಮೂಲಕ ಮತ್ತಷ್ಟು ಜವಾಬ್ದಾರಿಯನ್ನ ಪಕ್ಷ ನೀಡಿದೆ.