ಇದು ಕಾನೂನಾ…!?- ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ನೋಡ್ಲೇಬೇಕಾದ ಸ್ಟೋರಿಯಿದು…!

ಹುಬ್ಬಳ್ಳಿ: ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಮಯದಲ್ಲಿ ಸರಕಾರ ಹಲವು ಸೂಚನೆಗಳನ್ನ ಪಾಲನೆ ಮಾಡುವಂತೆ ಸಾರ್ವಜನಿಕರಿಗೆ ವಿನಂತಿ ಮಾಡಿಕೊಂಡಿದೆ. ಅದನ್ನೇ ಪಾಲನೆ ಮಾಡುವಲ್ಲಿ ಸ್ವಲ್ಪ ಏರುಪೇರಾದರೂ, ಪೊಲೀಸರು ಅದ್ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಮೊದಲು ಈ ವೀಡಿಯೋವನ್ನ ನೋಡಿ ಬಿಡಿ..
ಇಲ್ಲಿ ಬೈಕ್ ಸವಾರನೊಬ್ಬ ನಂದು ತಪ್ಪಾಗಿದೆ ಬಿಡಿ ಎಂದು ಅಂಗಲಾಚಿದರೂ, ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯವರು, ಹೇಗೆಲ್ಲಾ ನಡೆದುಕೊಳ್ಳುತ್ತಿದ್ದಾರೆ ಎಂದು ವೀಡಿಯೋದಲ್ಲಿ ಗೋಚರಿಸುತ್ತದೆ.
ಬೈಕಿನಲ್ಲಿ ಕೂತವನನ್ನ ಜಗ್ಗಾಡಿ ಬೀಳಿಸುವ ಪ್ರಯತ್ನ ಮಾಡಲಾಗತ್ತೆ. ಅಷ್ಟೇ ಅಲ್ಲ, ಇನ್ನೋರ್ವ ಪೊಲೀಸ್ ಬೈಕ್ ಕೀ ತೆಗೆದುಕೊಂಡರೇ, ಮತ್ತೋರ್ವ ಹವಾಲ್ದಾರ ಬೈಕಿನಲ್ಲಿ ಹಿಂದೆ ಕುಳಿತವನನ್ನ ಆರೋಪಿಯಂತೆ ಜಗ್ಗಿಕೊಂಡು ಠಾಣೆಗೆ ಕರೆದುಕೊಂಡು ಹೋಗ್ತಾರೆ.
ಮನುಷ್ಯನಿಗೆ ಬಡತನ ಕೆಟ್ಟದ್ದು. ಅದು ಇಂತಹ ಸಮಯದಲ್ಲಿ ಮತ್ತಷ್ಟು ಹೆಚ್ಚಾಗಿರತ್ತೆ ಎಂಬ ಕಲ್ಪನೆಯೂ ಇಲ್ಲದೆ ನಡೆದುಕೊಳ್ಳುವುದು ಅದ್ಯಾವ ಮಾನವೀಯತೆ.
ಸಾರ್ವಜನಿಕರೊಂದಿಗೆ ಚೆನ್ನಾಗಿರಿ, ಜನರಲ್ಲಿ ಪೊಲೀಸರ ಬಗ್ಗೆ ಭಾವನೆ ಚೆನ್ನಾಗಿ ಇರುವಂತೆ ನೋಡಿಕೊಳ್ಳಿ ಎಂದು ಹಿರಿಯ ಅಧಿಕಾರಿಗಳು ಎಷ್ಟೋ ಬಾರಿ ಹೇಳಿದರೂ ಪ್ರಯೋಜನವಿಲ್ಲ.
ದಕ್ಷ ಪೊಲೀಸ್ ಕಮೀಷನರ್ ಲಾಬುರಾಮ್ ಅವರ ವ್ಯಾಪ್ತಿಯಲ್ಲಿ ಇಂತಹದಕ್ಕೆ ನೂರಕ್ಕೆ ನೂರರಷ್ಟು ಅವಕಾಶವೇ ಇಲ್ಲಾ. ಆದರೂ ಹೀಗೆ ನಡೆದುಕೊಳ್ಳಲಾಗುತ್ತಿದೆ. ಇಂತಹವರಿಗೆ ಏನೂ ಕಾನೂನು ಇಲ್ವಾ…!?