Posts Slider

Karnataka Voice

Latest Kannada News

40ರೊಟ್ಟಿಯಿದ್ದ ಬಾಕ್ಸ್ ಗೆ ಲಗೇಜ್ ನೆಪ: ಕಂಡಕ್ಟರ್ ಗೆ ನೋಟೀಸ್…!

Spread the love

ಹೊಸಪೇಟೆ: ಬಸ್ಸಿನಲ್ಲಿ ಪ್ರಯಾಣಿಕರು ತೆಗೆದುಕೊಂಡು ಬಂದಿದ್ದ ಜೋಳದ ರೊಟ್ಟಿಯ ಬಾಕ್ಸ್ ಗೆ ಲಗೇಜ್ ಹಣ ಪಡೆದಿಲ್ಲವೆಂದು ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಕಂಡಕ್ಟರ್ ಗೆ ನೋಟೀಸ್ ನೀಡಿದ ಘಟನೆ ನಡೆದಿದೆ.

ಹೊಸಪೇಟೆ ವಿಭಾಗದ ಸಂಡೂರು ಘಟಕದ ಬಸ್ಸಿನಲ್ಲಿ ಘಟನೆ ನಡೆದಿದ್ದು, ಕಂಡಕ್ಟರ್ ಕೆ.ಅಕ್ಬರಗೆ ನೋಟಿಸ್ ನೀಡಲಾಗಿದೆ. ರಾಜ್ಯದಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲು.

ಸಾರಿಗೆ ಇಲಾಖೆಯಲ್ಲಿ ಕಂಡಕ್ಟರ್ ಮತ್ತು ಚಾಲಕರಿಗೆ ಎಷ್ಟೊಂದು ಕಿರುಕುಳ ಇದೆಯಂದು ಮೊದಲಿಂದಲೂ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಇಂತಹ ಯೂಸ್ ಲೆಸ್ ನೆಪದಲ್ಲೂ ಅವರಿಗೆ ಕಿರುಕುಳ ನೀಡಲಾಗುತ್ತಿದೆ.

ರೊಟ್ಟಿಯ ಬಾಕ್ಸ್ ಗೆ 21 ರೂಪಾಯಿ ಲಗೇಜ್ ದರ ಪಡೆದುಕೊಳ್ಳಬೇಕಿತ್ತು. ಬಸ್ ತಪಾಸಣೆ ವೇಳೆಯಲ್ಲಿ ಇಲಾಖೆಯ ಅಧಿಕಾರಿಗಳು ನೋಟಿಸ್ ನೀಡಿದ್ದು, ಇಲಾಖೆಯಲ್ಲಿ ಆತಂರಿಕ ಭಿನ್ನಾಬಿಪ್ರಾಯಕ್ಕೆ ಕಾರಣವಾಗುತ್ತಿದೆ.


Spread the love

Leave a Reply

Your email address will not be published. Required fields are marked *