ಅಣ್ಣಿಗೇರಿ ಚುನಾವಣೆ: ಕಾಂಗ್ರೆಸ್ ಜೊತೆ ಜೆಡಿಎಸ್ ನವರ “ಆಡೂನ್ ಬಾ.. ಕೆಡಸೂನ್ ಬಾ.. ಆಟ”…!

ಅಣ್ಣಿಗೇರಿ: ಪಟ್ಟಣದ ಪುರಸಭೆಯ ಚುನಾವಣೆಯ ಪೂರ್ವದಲ್ಲಿ ಜೆಡಿಎಸ್ ಸೇರಿಕೊಂಡಿದ್ದ ಮಾಜಿ ಶಾಸಕ ಎನ್.ಎನ್.ಕೋನರೆಡ್ಡಿಯವರ ಅನುಯಾಯಿಗಳು ಕಾಂಗ್ರೆಸ್ ಜೊತೆ ‘ರಾಜಕೀಯ’ ಆರಂಭಿಸಿದ್ದು, ಕಾಂಗ್ರೆಸ್ ಗೆ ಅತೀವ ಅಸಹ್ಯ ಮೂಡಿಸುವಂತಾಗಿದೆ.

ಮಾಜಿ ಶಾಸಕ ಕೋನರೆಡ್ಡಿಯವರ ಜೊತೆಗಿರುತ್ತಿದ್ದ ಶಿವಶಂಕರ ಕಲ್ಲೂರ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿತ್ತು. ಅದೇ ಪ್ರಕಾರ, ಕಾಂಗ್ರೆಸ್ ನ ಬಿ ಫಾರ್ಮ ಪಡೆದು, ಕಲ್ಲೂರ ನಾಮಪತ್ರವನ್ನ ಸಲ್ಲಿಸಿದ್ದರು. ಇದಾದ ಮೇಲೆ, ಇದೀಗ ಕಣದಿಂದಲೇ ಹಿಂದೆ ಸರಿದು ಮತ್ತೆ ಜೆಡಿಎಸ್ ನತ್ತ ಹೆಜ್ಜೆ ಹಾಕಿದ್ದಾರೆ.
ಮಾಜಿ ಶಾಸಕ ಕೋನರೆಡ್ಡಿಯವರು ತಮ್ಮ ಹಿತವನ್ನ ನೋಡಿಕೊಂಡು ಪಕ್ಷ ತೊರೆತಿದ್ದಾರೆಂದಿರುವ ಶಿವಶಂಕರ ಕಲ್ಲೂರ, ಕಾಂಗ್ರೆಸ್ ಜೊತೆಗೆ ನಾವೂ ಮಾನಸಿಕವಾಗಿ ಹೊಂದಿಕೊಳ್ಳಲು ಆಗುತ್ತಿಲ್ಲವೆಂದು ಹೇಳುತ್ತಿದ್ದಾರೆ.
ಮಾಜಿ ಶಾಸಕ ಕೋನರೆಡ್ಡಿಯವರ ಜೊತೆಗಾರರು, ಕೋನರೆಡ್ಡಿಯವರು ಪಕ್ಷ ಸೇರಿದ ವಾರದಲ್ಲೇ ಇಂತಹದಕ್ಕೆ ಮುಂದಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಇರುಸು ಮುರುಸುಂಟು ಮಾಡಿದೆ. ಹೀಗಾಗಿ ರಾಜಕೀಯ ಪಂಡಿತರು “ಜೆಡಿಎಸ್ ನ ಕೋನರೆಡ್ಡಿ ಕಡೆದವರು ಹಿಂಗೇರಿ, ಆಡೂನ್ ಬಾ.. ಕೆಡಸೂನ್ ಬಾ..’ ಮಾಡ್ತಿರಾರ್ ಎನ್ನುವಂತಾಗಿದೆ.