“ಪೊಲೀಸ್” ಬೈಕ್ ಲ್ಲಿ ಬಂದು ಧಾರವಾಡದಲ್ಲಿ ಮೂರು ಸರಗಳ್ಳತನ…

ಧಾರವಾಡ: ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಮೂರು ಮಹಿಳೆಯರ ಮಂಗಲಸೂತ್ರವನ್ನ ಎಗರಿಸಿ ಪರಾರಿಯಾದ ಘಟನೆ ಇಂದು ಬೆಳ್ಳಂಬೆಳಿಗ್ಗೆ ನಡೆದಿದ್ದು, ಪೊಲೀಸರೇ ದಂಗು ಬಡಿಯುವಂತಾಗಿದೆ.

ಧಾರವಾಡದ ಹೊಸಯಲ್ಲಾಪುರ ಪ್ರದೇಶದಲ್ಲಿ ತಮ್ಮ ಸಂಬಂಧಿಕರೊಂದಿಗೆ ಹೊರಟಿದ್ದ ವಿದ್ಯಾ ಬಿಜಾಪುರ ಎಂಬ ಮಹಿಳೆಯ ಮೂರುವರೆ ತೊಲೆ ಚಿನ್ನದ ಮಂಗಲಸೂತ್ರ, ಶ್ರೀನಗರದಲ್ಲಿ ವಾಯು ವಿಹಾರಕ್ಕೆ ಪತಿಯೊಂದಿಗೆ ಹೊರಟಿದ್ದ ಮಹಿಳೆಯ ನಾಲ್ಕೂವರೆ ತೊಲೆ ಬಂಗಾರದ ಮಂಗಲಸೂತ್ರವನ್ನ ಎಗರಿಸಿದ್ದಾರೆ.
ಬೈಕಿನಲ್ಲಿ ಬಂದು ಇಬ್ಬರು ಬ್ಲ್ಯಾಕ್ ಜಾಕೆಟ್ ಮತ್ತು ಮಾಸ್ಕ್ ಹಾಕಿಕೊಂಡಿದ್ದ ಸರಗಳ್ಳರು ಬಳಕೆ ಮಾಡಿದ್ದ ಬೈಕಿನ ಮೇಲೆ ಪೊಲೀಸ್ ಎಂದು ಬರೆಯಲಾಗಿದ್ದು, ಆ ಬೈಕ್ ಕಳೆದ ಎರಡು ದಿನಗಳ ಹಿಂದೆ ಲಿಂಗಾಯತ ಭವನದ ಬಳಿಯಿಂದ ಕದಿಯಲಾಗಿತ್ತೆಂದು ಗೊತ್ತಾಗಿದೆ.
ಘಟನೆ ನಡೆಯುತ್ತಿದ್ದ ಹಾಗೇ ಸ್ಥಳಕ್ಕೆ ಧಾರವಾಡಕ್ಕೆ ಆಗಮಿಸಿದ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ನಗರದ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ತಕ್ಷಣವೇ ಆರೋಪಿಗಳ ಪತ್ತೆ ಮಾಡಬೇಕೆಂದು ಸೂಚನೆ ನೀಡಿದ್ದಾರೆ.