Posts Slider

Karnataka Voice

Latest Kannada News

ಮುಳಮುತ್ತಲದಲ್ಲಿ ‘ಕಾವೇರಿ’ದ ಸತಿಯಿಂದ ‘ಶಿವಾ’ಲಿಂಗನಕ್ಕಾಗಿ ‘ಪತಿ ಭೀಮ’ನ ಕೊಲೆ…

Spread the love

ಧಾರವಾಡ: ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ತನ್ನ ಪತಿಯನ್ನೇ ಸತಿಯೊಬ್ಬಳು ಕೊಲೆ ಮಾಡಿದ ಘಟನೆ ನಡೆದಿದ್ದು, ಇದಕ್ಕೆ ಅನೈತಿಕ ಸಂಬಂಧ ಕಾರಣವೆನ್ನಲಾಗಿದೆ.

ಪತಿಯ ಕೊಲೆ ಮಾಡಿಸುವಲ್ಲಿ ಕೈ ಚಳಕ ತೋರಿಸಿದ ಸತಿ..

ಮುಳಮುತ್ತಲ ಗ್ರಾಮದಲ್ಲಿನ ಭೀಮಪ್ಪ ಸಿದ್ಧಣ್ಣವರ ಎಂಬಾತನನ್ನ ಈತನ ಸತಿ ಕಾವೇರಿ ಹಾಗೂ ಆಕೆಯ ಪ್ರಿಯಕರ ಶಿವು ನಿಂಬೋಜಿ ಕೂಡಿಕೊಂಡು ಕೊಡಲಿಯಿಂದ ಹೊಡೆದು ಕೊಲೆ ಮಾಡಲಾಗಿದೆ.

ಭೀಮಣ್ಣನ ಸತಿ ಕಾವೇರಿ ಮದುವೆಯಾದ ನಂತರವೂ ಶಿವುನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಇದೇ ಕಾರಣಕ್ಕೆ ಪದೇ ಪದೇ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಹೀಗಾಗಿ ತನ್ನ ಪ್ರಿಯಕರನ ಜೊತೆಗೂಡಿ ಪತಿಯನ್ನೇ ಮುಗಿಸಿದ್ದಾಳೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗರಗ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿ ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.


Spread the love

Leave a Reply

Your email address will not be published. Required fields are marked *