ಮುಸ್ಲಿಂ ಸಮಾಜದ ಮುಖಂಡರಿಂದ ಪದ್ಮಶ್ರೀ ವಿಜಯ ಸಂಕೇಶ್ವರ ಅವರಿಗೆ ಸತ್ಕಾರ

ಹುಬ್ಬಳ್ಳಿ: ಅತ್ಯುನ್ನತ ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತರಾದ ಉದ್ಯಮಿ ವಿಜಯ ಸಂಕೇಶ್ವರ ಅವರಿಗೆ ಮುಸ್ಲಿಂ ಸಮಾಜದ ಮುಖಂಡರುಗಳು ಭೇಟಿಯಾಗಿ ಪುಷ್ಪ ಗುಚ್ಛ ನೀಡಿ ಗೌರವಿಸಿದರು.

ಸಮಾಜದ ಹಿರಿಯರಾದ ಎಂ ಎಂ ಮಳಗಿ, ಹೊಟೇಲ್ ಉದ್ಯಮಿ ಹಾಗೂ ಸನಾ-ಶಾಹೀನ ಕಾಲೇಜ್ ಆಡಳಿತ ಮಂಡಳಿಯ ಅಶ್ರಫ್ ಅಲಿ, ಹಾಗೂ ಅಂಜುಮನ್ ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ವಹಾಬ್ ಮುಲ್ಲಾ, ಖಾಲೀದ ಮಳಗಿ, ಆರೀಫ್ ಮುಜಾವರ, ಅಬ್ದುಲ್ ರೆಹಮಾನ ಮುಲ್ಲಾ, ಆಯುಬ್ ಸವಣೂರ, ಮಹ್ಮದ್ ತಾರೀಖ ಸೇರಿದಂತೆ ಹಲವರು ಸಂಕೇಶ್ವರ ಅವರಿಗೆ ಸನ್ಮಾನಿಸಿದರು.

ಹಾಗೆಯೇ ಹುಬ್ಬಳ್ಳಿ ನಗರದ ಹೂವಿನ ವ್ಯಾಪಾರಸ್ಥರಾದ ಹಾಜಿ ಬಾಷಾಸಾಬ ಅತ್ತಾರ, ದಾದಪೀರ ಅತ್ತಾರ, ಅಬ್ದುಲ್ ಖಾದರ ಮುಜಾವರ, ಮಹ್ಮದ ಹನೀಫ ಮುಜಾವರ ಹಾಗೂ ಇನ್ನಿತರರು ಪದ್ಮಶ್ರೀ ವಿಜಯ ಸಂಕೇಶ್ವರ ಅವರಿಗೆ ಪುಷ್ಪಗುಚ್ಛ ನೀಡಿ ಶಾಲು ಹೊದಿಸಿ ಗೌರವಿಸಿದರು.