Posts Slider

Karnataka Voice

Latest Kannada News

ಹುಬ್ಬಳ್ಳಿ ಗಾಂಜಾ ಪ್ರಕರಣ: ಸಸ್ಪೆಂಡ್ ಆದವರಿಂದಲೇ ಇಲಾಖೆ ಮರ್ಯಾದೆ ತೆಗೆಯಲು ಷಢ್ಯಂತ್ರ…..!?

Spread the love

ಹುಬ್ಬಳ್ಳಿ: ನವನಗರದ ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟದ ಪ್ರಕರಣವನ್ನ ಮುಚ್ಚಿ ಹಾಕಿ ಅಮಾನತ್ತುಗೊಂಡ ಕೆಲವು ‘161’ ಗಿರಾಕಿಗಳು ತಮ್ಮದೇ ಇಲಾಖೆಯ ಪ್ರಮುಖ ಅಧಿಕಾರಿಗಳ ಮಾನ ತೆಗೆಯಬೇಕೆಂಬ ಉದ್ದೇಶದಿಂದ ಪ್ರತಿದಿನವೂ ಷಢ್ಯಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆಂದು ಗೊತ್ತಾಗಿದೆ.

ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಗಾಂಜಾ ಮಾರಾಟ ಪ್ರಕರಣವನ್ನ ಮುಚ್ಚಿ ಹಾಕಿ “ಪೊಲೀಸಗಿರಿ” ತೋರಿಸಿದ್ದ ಮಹಾನ್ ಮೇಧಾವಿಗಳನ್ನ ಸಸ್ಪೆಂಡ್ ಮಾಡಿದ ನಂತರ ಅದರಲ್ಲಿನ ಕೆಲವರು ಸುಮ್ಮನೆ ಕುಳಿತಿಲ್ಲ.

ತಾವಿದ್ದ ಪೊಲೀಸ್ ಠಾಣೆಯಲ್ಲಿ ಏನೇನು ನಡೆಯತ್ತೆ. ಇದರಲ್ಲಿ ಯಾರನ್ನ ಹೇಗೆ ಸಿಗಿಸಬೇಕು. ಯಾವ ಕುತಂತ್ರ ಮಾಡಬೇಕೆಂದು ಹೊಂಚು ಹಾಕಿ ಕುಳಿತಿರುವುದು ಪೊಲೀಸ್ ಠಾಣೆಗಳಲ್ಲಿ ಅಸಹ್ಯ ಮೂಡಿಸಿದೆ ಎಂದು ತಿಳಿದು ಬಂದಿದೆ.

ಕೆಲವರು ಇನ್ನೂ ‘ಮಂತ್ಲಿ’ ಕಲೆಕ್ಟ್ ಮಾಡುವ ವಿಕ್ರಮವನ್ನ ಸಾಧಿಸಿದ್ದಾರೆಂಬುದು ರಹಸ್ಯವಾಗಿ ಉಳಿದಿಲ್ಲ. ಠಾಣೆಯಲ್ಲಿನ ಕಾರ್ಕೂನ್ ನ್ನ ಮೊಬೈಲ್ ನಂಬರ ಕಾಲ್ ಡಿಟೇಲ್ ತೆಗೆದರೇ ಸಾಕು, ಅಮಾನತ್ತಾಗಿರುವ ಯಾವ ಮೇಧಾವಿ ಮಂತ್ಲಿ ಕಲೆಕ್ಟ್ ಮಾಡುತ್ತಿದ್ದಾನೆಂಬುದು ಗೊತ್ತಾಗತ್ತೆ.

ದಕ್ಷ ಅಧಿಕಾರಿಗಳಾದ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಹಾಗೂ ಡಿಸಿಪಿ ಕೆ.ರಾಮರಾಜನ್ ಅವರು, ಗಾಂಜಾ ಪ್ರಕರಣದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದರ ಪರಿಣಾಮವೇ ಇಂತಹ ನೀಚತನ ನಡೆಯುತ್ತಿದೆ ಎಂದು ಗೊತ್ತಾಗಿದೆ.

ಪೊಲೀಸ್ ಇಲಾಖೆಯ ಮಾನವನ್ನ ಮೂರು ಕಾಸಿಗೆ ಹರಾಜು ಹಾಕಿ, ಈಗ ಮತ್ತೆ ಕುತಂತ್ರಕ್ಕೆ ಮುಂದಾಗಿರುವ ‘ನಮಕ್ ಹರಾಮ್’ರನ್ನ ಏನೂ ಮಾಡಬೇಕೆಂದು ದಕ್ಷರೆನಿಸಿಕೊಂಡ ಅಧಿಕಾರಿಗಳೇ ನಿರ್ಧಾರ ಮಾಡಬೇಕಿದೆ.

ಗಾಂಜಾ ಪ್ರಕರಣದಲ್ಲಿ ಇನ್ನೂವರೆಗೂ ಗಾಂಜಾ ಎಲ್ಲಿದೆ ಎಂಬ ಸತ್ಯ ಕೂಡಾ ಬಹಿರಂಗವಾಗದೇ ಇರುವುದೇ, ಇಂತಹ ನೀಚರಿಗೆ ಮತ್ತಷ್ಟು ಉಂಡ ಮನೆಗೆ ದ್ರೋಹ ಬಗೆಯಲು ಪ್ರೇರಪಣೆ ನೀಡಿದೆ ಎಂದರೇ ತಪ್ಪಾಗಲಾರದಲ್ಲವೇ ಪೊಲೀಸ್ ಕಮೀಷನರ್ ಲಾಬುರಾಮ್ ಸರ್..


Spread the love

Leave a Reply

Your email address will not be published. Required fields are marked *