ಡಾ.ಕ್ರಾಂತಿಕಿರಣಗೆ ಪತ್ನಿಯಿಂದ ಜೀವ ಬೆದರಿಕೆ….
1 min readಹುಬ್ಬಳ್ಳಿ: ನಗರದ ಶಿರೂರ ಪಾರ್ಕ್ ಪ್ರದೇಶದಲ್ಲಿರುವ ಮನೆಗೆ ನುಗ್ಗಿ ತಮ್ಮ ಮೇಲೆ ಕೈಯಿಂದ ಹಾಗೂ ಛತ್ರಿಯಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆಂದು ತಮ್ಮ ಪತ್ನಿಯ ವಿರುದ್ಧ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಡಾ. ಕ್ರಾಂತಿ ಕಿರಣ ದೂರು ದಾಖಲು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಮ್ಮ ಮಕ್ಕಳ ಎದುರಿಗೆ ಶೋಭಾ ಸುಣಗಾರ ಅಶ್ಲೀಲವಾಗಿ ಮಾತನಾಡಿದ್ದಾರೆಂದು ದೂರಿನಲ್ಲಿ ಡಾ.ಕ್ರಾಂತಿಕಿರಣ ಉಲ್ಲೇಖ ಮಾಡಿದ್ದಾರೆ.
ಈಗಾಗಲೇ ಡಾ.ಕ್ರಾಂತಿಕಿರಣ ಅವರ ಪತ್ನಿ ಶೋಭಾ ಸುಣಗಾರ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದಾರೆಂಬುದನ್ನ ದೂರಿನಲ್ಲಿ ತಿಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರೋ ವಿದ್ಯಾನಗರ ಠಾಣೆ ಪೊಲೀಸರು, ಶೋಭಾ ಸುಣಗಾರರ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.