Posts Slider

Karnataka Voice

Latest Kannada News

2ಲಕ್ಷ ರೂಪಾಯಿ ಪಡೆಯುವಾಗ ಇನ್ಸಪೆಕ್ಟರ್ ಎಸಿಬಿ ಬಲೆಗೆ…

1 min read
Spread the love

ಬೆಂಗಳೂರು: ಲ್ಯಾಂಡ್ ಡೀಲ್ ವಿಚಾರದಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇನ್ಸ್ ಪೆಕ್ಟರ್ ಬೆಂಗಳೂರು ಎಸಿಬಿ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದು, ಚಿಕ್ಕಜಾಲ ಇನ್ಸ್ ಪೆಕ್ಟರ್ ರಾಘವೇಂದ್ರ ಎಸ್ ಆರ್ ಹಾಗೂ ಮಧ್ಯವರ್ತಿ ರಾಘವೇಂದ್ರ ನನ್ನು ಎಸಿಬಿ ಅಧಿಕಾರಿಗಳು ಟ್ರ್ಯಾಪ್​ ಮಾಡಿ ರೆಡ್​ಹ್ಯಾಂಡ್​ ಆಗಿ ಸೆರೆ ಹಿಡಿದಿದ್ದಾರೆ.

ಐದು ಎಕರೆ ಲ್ಯಾಂಡ್ ವಿಚಾರದಲ್ಲಿ ಎಫ್ ಐ ಆರ್ ದಾಖಲಿಸಲು 10 ಲಕ್ಷ ಬೇಡಿಕೆ ಇಟ್ಟಿದ್ದ ಇನ್ಸ್ ಪೆಕ್ಟರ್ ರಾಘವೇಂದ್ರ. ಶಿವಶಂಕರ್ ಎಂಬುವರಿಗೆ ಸೇರಿದ್ದ ಐದು ಎಕರೆ ಲಿಟಿಗೇಷನ್ ಸೈಟ್ ಗೆ ಹಣ ಡಿಮ್ಯಾಂಡ್ ಮಾಡಿದ್ದ ಇನ್ಸ್​ಪೆಕ್ಟರ್​ 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಸದ್ಯ ಎಸಿಬಿ ಅಧಿಕಾರಿಗಳಿಂದ ಇನ್ಸ್ ಪೆಕ್ಟರ್ ರಾಘವೆಂದ್ರ ಎಸ್. ಆರ್ ಹಾಗೂ ಮಧ್ಯವರ್ತಿ ರಾಘವೇಂದ್ರ ನನ್ನು ಬಂಧಿಸಲಾಗಿದೆ.ಈ ಹಿಂದೆ ಚಿಕ್ಕಜಾಲ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದ ಯಶವಂತ್ ಕೂಡ ಇದೇ ಪ್ರಕರಣದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದರು.


Spread the love

Leave a Reply

Your email address will not be published. Required fields are marked *