ಮುತ್ತಣ್ಣ ಸರವಗೋಳ-ಹುಬ್ಬಳ್ಳಿಗೆ, ಪ್ರಭುಗೌಡ- ಬಾಗಲಕೋಟೆಗೆ, ಭರತ ರೆಡ್ಡಿ-ದಾವಣಗೆರೆಗೆ ಪೋಸ್ಟಿಂಗ್…!

ಬೆಂಗಳೂರು: ಕಳೆದ ಎರಡು ದಿನಗಳ ಹಿಂದಷ್ಟೇ 25 ಇನ್ಸಪೆಕ್ಟರುಗಳಿಗೆ ಮುಬಂಡ್ತಿ ನೀಡಿ ಆದೇಶ ಹೊರಡಿಸಿದ್ದ ಬೆನ್ನಲ್ಲೇ, 25 ಡಿವೈಎಸ್ಪಿಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಲೋಕಾಯುಕ್ತದಲ್ಲಿದ್ದ ಮುತ್ತಣ್ಣ ಸರವಗೋಳ ಅವರನ್ನ ಹುಬ್ಬಳ್ಳಿ ಅರಣ್ಯ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ. ಪ್ರಭುಗೌಡ ಕಿರದಳ್ಳಿಯವರನ್ನ ಮುಂಡಗೋಡ ಪೊಲೀಸ್ ಠಾಣೆಯಿಂದ ಬಾಗಲಕೋಟೆ ಡಿಸಿಆರ್ ಬಿಗೆ ವರ್ಗಾಯಿಸಲಾಗಿದೆ.

ಉಳಿದಂತೆ ಶಿವಪ್ರಕಾಶ ನಾಯಕ ಅವರನ್ನ ಮಂಗಳೂರಿನ ಮೆಸ್ಕಾಂಗೆ, ಭರತ ರೆಡ್ಡಿಯವರನ್ನ ದಾವಣಗೆರೆ ಐಜಿಪಿ ಕಚೇರಿಗೆ. ಅಬ್ದುಲ್ ಕರೀಂ ರಾಹುತರ್ ಅವರನ್ನ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.