ನಮ್ಮೂರು ಕಾಯೋ ದೊರೆಯೇ.. ನಿನಗೊಂದು ಜಯಕಾರ….!

ಬೆಳಗಾವಿ: ಭಾರತೀಯ ಸೇನೆಯಲ್ಲಿ 18 ವರ್ಷಗಳ ಕಾಲ ದೇಶ ಸೇವೆಯನ್ನ ಮಾಡಿ, ತವರಿಗೆ ಬಂದ ಯೋಧನಿಗೆ ಅಭೂತಪೂರ್ವ ಬೆಂಬಲ ಸ್ವಾಗತವನ್ನ ಸವದತ್ತಿ ತಾಲೂಕಿನ ಸಿಂಗಾರಕೊಪ್ಪ ಗ್ರಾಮದಲ್ಲಿ ಕೋರಲಾಯಿತು.

ಮಲ್ಲಿಕಾರ್ಜುನ ಗದಿಗೆಪ್ಪ ವನ್ನೂರ ಎಂಬ ಯೋಧ ಕಳೆದ 18 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಮರಳಿ ಬರುತ್ತಿದ್ದ ಹಾಗೇ, ಚಡ್ಡಿ ದೋಸ್ತರ ಗೆಳೆಯರ ಬಳಗ, ಕಾರ್ಯಕ್ರಮ ಆಯೋಜನೆ ಮಾಡಿತ್ತು.

ಚಡ್ಡಿ ದೋಸ್ತರ ಗೆಳೆಯರ ಬಳಗದಲ್ಲಿ ಪೊಲೀಸರು ಸೇರಿದಂತೆ ಹಲವು ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರೂ ಕೂಡಿಕೊಂಡು ಯೋಧನಿಗೆ ಅಭೂತ ಪೂರ್ವ ಸ್ವಾಗತ ನೀಡಿದರು.