ಹೊಡಿಮಗ.. ಹೊಡಿಮಗ.. ಬಿಡಬ್ಯಾಡ್ ಅವ್ನಾ… ರಾಜಾಹುಲಿ ಸಿನೇಮಾದ ರಿಯಲ್ ಕಹಾನಿ…!

ಕೋಲಾರ: ಯುವತಿಯರನ್ನ ಚುಡಾಯಿಸಿದ್ದಕ್ಕೆ ಸಾರಿಗೆ ಬಸ್ ನಲ್ಲಿ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ತಾಡಿಗೋಳದ ಬಳಿ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋ ಇಲ್ಲಿದೆ ನೋಡಿ..
https://www.facebook.com/100045805057267/videos/1520033498329661/
ಬಾಬು ಎನ್ನುವ ಯುವಕನಿಗೆ ಮನಬಂದಂತೆ ಯುವಕರ ಗುಂಪು ಹಿಗ್ಗಾ ಮುಗ್ಗ ಥಳಿಸಿದೆ. ಅಭಿ, ನಾಗೇಂದ್ರ, ಗಂಗಾಧರ್, ನರೇಶ ಎನ್ನುವ ಯುವಕರೇ ಗುಂಪಿನಲ್ಲಿದ್ದರು.
ತಾಡಿಗೋಳ್ ಗ್ರಾಮದ ಯುವತಿಯರನ್ನ ಬಾಬು ಹಾಗು ಮತ್ತೊಬ್ಬ ಯುವಕ ಚುಡಾಯಿಸಿದ್ದರು. ಚುಡಾಯಿಸಬೇಡ ಎಂದು ಎಚ್ಚರಿಕೆ ನೀಡಿದ್ದರೂ ಕೂಡಾ, ಮತ್ತೆ ಹಾಗೇ ಮಾಡಿದ್ದ ಪರಿಣಾಮ ಧರ್ಮದೇಟು ಬಿದ್ದಿದೆ.
ಗೌನಿಪಲ್ಲಿ ಗ್ರಾಮದಿಂದ ಶ್ರೀನಿವಾಸಪುರ ಪಟ್ಟಣಕ್ಕೆ ತೆರಳುತ್ತಿದ್ದ ಬಸ್ ನಲ್ಲಿ ಘಟನೆ ನಡೆದಿದ್ದು, ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.