ಬಿಜೆಪಿಯ ಎಲ್ಲ ಶಾಸಕರು ಮುಖ್ಯಮಂತ್ರಿಯಾಗೋವಷ್ಟು ಸಮರ್ಥರಿದ್ದಾರೆ: ಸಚಿವ ಮುರುಗೇಶ ನಿರಾಣಿ

ಬೆಂಗಳೂರು: ರಾಜ್ಯದಲ್ಲಿನ ಭಾರತೀಯ ಜನತಾ ಪಕ್ಷದ ಪ್ರತಿಯೊಬ್ಬ ಶಾಸಕರು ಮುಖ್ಯಮಂತ್ರಿಯಾಗೋಕೆ ಸಮರ್ಥರಿದ್ದಾರೆಂದು ಸಚಿವ ಮುರುಗೇಶ ನಿರಾಣಿ ಹೇಳಿದರು.

ರಾಜಧಾನಿಯಲ್ಲಿ ಬಿ.ಎಸ್.ಯಡಿಯೂರಪ್ಪನವರನ್ನ ಭೇಟಿಯಾದ ನಂತರ ಮಾತನಾಡಿದ ಮುರುಗೇಶ ನಿರಾಣಿಯವರು, ಹೊಸ ನಾಯಕನ ಆಯ್ಕೆಯನ್ನ ಹೈಕಮಾಂಡ್, ಸಂಘದ ಪರಿವಾರದವರು ಕೂಡಿಕೊಂಡು ಮಾಡುತ್ತಾರೆ. ಯಾರನ್ನೇ ಮಾಡಿದ್ರೂ, ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ ಎಂದು ಹೇಳಿದರು.
ನವದೆಹಲಿಯಲ್ಲಿ ನಾನು ಲಾಭಿ ಮಾಡಿಲ್ಲ. ಯಾವಾಗಲೂ ನಾನು ಯಾವುದೇ ಹುದ್ದೆಗೂ ಲಾಭಿ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲವೆಂದು ಹೇಳಿದ ನಿರಾಣಿ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಿರುವುದಾಗಿ ತಿಳಿಸಿದರು.