Posts Slider

Karnataka Voice

Latest Kannada News

ರಾಕ್ಷಸ ನಗೆ ಬೀರುತ್ತಿರುವ ಶಿಕ್ಷಕ ಸಂಘದವರಿಗೆ- ಅವರದ್ದೆ ಸಂಘದ ಮಾಜಿ ಅಧ್ಯಕ್ಷ ಕೊಟ್ಟ ಚಾಟಿಯೇಟು…!

Spread the love

ಮಾನ್ಯ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಿ.ಟಿ. ತಿಮ್ಮನಗೌಡ್ರ ಮಾಜಿ ಅಧ್ಯಕ್ಷರು ಪ್ರಾ ಶಾ ಶಿಕ್ಷಕರ ಸಂಘ ತಾಲೂಕಾ ಘಟಕ ಕುಂದಗೋಳ ಜಿಲ್ಲಾ ಧಾರವಾಡ ಇವರಿಂದ ತಮಗೆ ವಿನಯಪೂವ೯ಕ ನಮನಗಳು..

ನಾನು ನನ್ನ ವೇತನದಲ್ಲಿ ₹ 200/-ಕಟಾವಣೆ ಮಾಡಬಾರದೆಂದು ಅಸಮ್ಮತಿ ಪತ್ರ ಕೊಡಲಿಕ್ಕೆ ಸಕಾರಣಗಳನ್ನು ನನ್ನ ಆತ್ಮಸಾಕ್ಷಿಯಾಗಿ ತಮ್ಮಲ್ಲಿ ನಿವೇದಿ‌ಸಿಕೊಳ್ಳುವೆನು. ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಮಾನ್ಯ ಷಡಕ್ಷರಿ ಸಾಹೇಬರು ದಿನಾಂಕ 13/12/2020 ರಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ 1ಗಂಟೆ 35 ನಿಮಿಷಗಳ ಭಾಷಣ. ಅದರಲ್ಲಿ ಅವರು ಸಂಘದ ಇತಿಹಾಸದಲ್ಲಿಯೇ ಯಾರು ಮಾಡದ ತಾಲೂಕು ಮತ್ತು ಜಿಲ್ಲೆಗೆ ಕೊಡಬೇಕಾದ ಹಣವನ್ನು ಚೆಕ್ ನೀಡಿದ್ದು. ನೌಕರರ ಭವನದ ನವೀಕರಣದ ಸಾಧನೆ. ಒಂದೇ ವಷ೯ದ ವಂತಿಗೆ ಸಂಗ್ರಹಿಸಿ 9 ಕೋಟಿ 75 ಲಕ್ಷಗಳ ಠೇವಣಿ ಯ ಮಾಹಿತಿ ಸಭೆಗೆ ನೀಡಿದ್ದು. ಎಲ್ಲವೂ ಮೊದಲ ಹೊಸ ಹೆಜ್ಜೆಗಳು, ಹೊಸ ಕನಸುಗಳು. ಆಗ ನಾನು ಅವರು ನಮ್ಮ ಹೃದಯದಲ್ಲಿ ಭಿತ್ತಿದ ಹೊಸ ಕನಸುಗಳಿಗೆ ಮಾರುಹೋಗಿ, ಅವರ ಅಭಿಮಾನಿಯಾದೆ. ಆದರೆ, ಚುನಾವಣಾ ಸಮಯದಲ್ಲಿ ನಮ್ಮ ಮೂಲ ಸಂಘದ ಸ್ವಾಭಿಮಾನಿಗಳ, ಬಲಾಢ್ಯರ ಅನೇಕ ಚುನಾವಣಾ ಸಮಯದಲ್ಲಿನ ಅವರ ಅಕ್ರಮಗಳನ್ನು, ಅವರು ಮಾಡಿದ ₹ 2.5 ಕೋಟಿ ಸಾಲ ಮಾಡಿದ ಸಾಧನೆ, ಸಂಘಕ್ಕೆ ಸ್ವಂತ ಕಟ್ಟಡ ಇಲ್ಲದ ಸಾಧನೆ, ಸಮಸ್ಯೆಗಳನ್ನು ಜೀವಂತವಾಗಿ ಇಟ್ಟ ಸಾಧನೆ. ನಾನು ನೌಕರಿಗೆ ಸೇರಿದಾಗ ಇಲ್ಲಿಯವರಿಗೆ ಅವರು ಹೇಳುತ್ತಾ ಬಂದಿದ್ದು ಮುಖ್ಯೋಪಾಧ್ಯಾಯರ ಶ್ರೇಣಿಯ ಬೇಡಿಕೆ, ಎಲ್ಲ ಶಿಕ್ಷಕರನ್ನು ಶಿಕ್ಷಣ ಸಂಯೋಜಕ, ಎಇಓ, ಬಿಇಓ, ಡಿಡಿಪಿಐರನ್ನಾಗಿ ಮಾಡುವುದು. (ಹೆಡ್ ಮಾಸ್ತರನ್ನಾಗಿ ಮಾಡಲು ಆಗಿಲ್ಲ. ಕೆಲವರು, ಹಾಗೆ ನಿವೃತ್ತರಾಗಿದ್ದು ಸುಳ್ಳೇ. ಪ್ರೌಢ ಶಾಲೆಗೆ ಕೂಡ ಬಡ್ತಿ ಕನಸು ಕನಸೆ) ಎಲ್ಲ ಸ ಕಿ ಪ್ರಾ ಶಾಲೆಗೆ ಹೆಡ್ ಮಾಸ್ತರವರ ಹುದ್ದೆ ಮಂಜೂರಿ, ಇವು ಸವ೯ಕಾಲದ ಬೇಡಿಕೆಗಳಾಗಿ ಇರುವುದು ಸುಳ್ಳೇ…??? S S A ದಲ್ಲಿ ವಿಜ್ಞಾನ ಟಿ ಜಿ ಟಿ ಮಂಜೂರು ಆದಾಗ, ವಿಷಯವಾರು ಟಿ ಜಿ ಟಿ ಮಂಜೂರು ಮಾಡಿಸದೇ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪದವೀಧರ ಶಿಕ್ಷಕರಿಗೆ ಸಿಗಬೇಕಾದ ಬಡ್ತಿಗೆ ಎಳ್ಳು ನೀರು ಬಿಟ್ಟಿದ್ದೊಂದು ದೊಡ್ಡ ಸಾಧನೆ. (ಇದು ಪದವೀಧರ ಶಿಕ್ಷಕರಿಗೆ ಸ್ಥಾನ, ಮಾನಕ್ಕೆ ಮತ್ತು ಹಣದ ದೃಷ್ಟಿಯಿಂದ ಕೂಡ ದೊಡ್ಡ ಅನ್ಯಾಯ ಈ ಕುರಿತು ಚಿಂತನೆ ಮಾಡಿ) ವಗಾ೯ವಣಿ ವಿಷಯದಲ್ಲಿ ಸಮಾನತೆ ಪದಕ್ಕೆ ಅವಮಾನ ಮಾಡಿದರು. ಗ್ರಾಮೀಣ ಭತ್ಯೆಯ ಮಂಜೂರಾತಿಗೆ ಪ್ರಯತ್ನ ಮಾಡದಿರುವುದು. ಇಷ್ಟೆಲ್ಲಾ ಸಾಧನೆ ಮಾಡಿದರೂ ಕೂಡ ನಾನು ಕುರಿಯಂತೆ ಇದ್ದು ,ಬಾಯಿ ಮುಚ್ಚಿ ಕೊಂಡಿದ್ದು ನನ್ನ ತಪ್ಪು. ಕ್ಷಮಿಸಿ. ನನ್ನ ಅಧ್ಯಕ್ಷತೆ ಅವಧಿಯಲ್ಲಿನ ನಮ್ಮ ತಾಲೂಕಿಗೆ ಕೊಡಬೇಕಾದ ವಂತಿಗೆ ಹಣವನ್ನು ರಾಜ್ಯದವರು ಕೊಡಲೇ ಇಲ್ಲ.ಕೇಳಿ ಕೇಳಿ ಸಾಕಾಯಿತು. ಇದು ಈಗಿನ ತಾಲೂಕಾ ಮತ್ತು ಜಿಲ್ಲಾ ನಾಯಕರಿಗೆ ಗೊತ್ತು.  ರಾಜ್ಯದವರು ಮಾಡಿದ ಘನಂದಾರಿ ಕೆಲಸಗಳ ಅನಾವರಣ ಮಾಡಿದ ಮಾನ್ಯ ಷಡಕ್ಷರಿ ಸರ್ ತಾವೇ ಅವರೊಂದಿಗೆ ರಾಜಿ ಮಾಡಿಕೊಂಡಿದ್ದು ಸಾಧನೆ ಎಂದು ತಿಳಿದುಕೊಂಡಿದ್ದರೆ ಮಹಾ ತಪ್ಪು. ಅವರು ಮೊದಲು ಸೋತು, ನಂತರ ಗೆದ್ದು ಬೀಗಿದರು. ನೀವು ಮೊದಲು ಗೆದ್ದು, ನಂತರ ಸೋತು ಸುಣ್ಣವಾದರಿ. ನಿಮ್ಮನ್ನು ನಂಬಿದ ಲಕ್ಷಾಂತರ ಶಿಕ್ಷಕರು, ಭ್ರಮನಿರಶನಗೊಂಡು ಹುಚ್ಚರಾದರು. ನಿಮ್ಮನ್ನು ಮೋಸದ ಖೆಡ್ಡಾಕ್ಕೆ ಕೆಡವಿ, ರಾಕ್ಷಸ ನಗೆಯಿಂದ ಅಡ್ಡಾಡುತ್ತಿದ್ದಾರೆ. ಹುಬ್ಬಳ್ಳಿಯ ಸಭೆಯಲ್ಲಿ ತಾವು ಆರೋಪ ಮಾಡುವಾಗ ಎಲ್ಲರೂ ವೇದಿಕೆಯ ಮೇಲೆ ಇದ್ದರು. ರಾಜ್ಯಾದ್ಯಂತ ತಾವು ಅಡ್ಡಾಡಿ ಎಲ್ಲರನ್ನೂ ಸ್ಯಾನಿಟರಿ ಮಾಡಿದ ತಮ್ಮನ್ನೇ ಅವರು ನಿಮ್ಮನ್ನು ಸ್ಯಾನಿಟರಿ ಮಾಡಿದರು. ಈ ಕುರಿತು ಪಿ ಎಚ್ ಡಿ ಮಾಡಿದರೂ ಅಡ್ಡಿಯಿಲ್ಲ. ಆದರೂ ಕೂಡ ನಾವು ಷಡಕ್ಷರಿ ಸರ್ ಅಭಿಮಾನಿಗಳು. ಕಾರಣ ಬಲಾಢ್ಯರು ಜ್ವಲಂತವಾಗಿ ಇಟ್ಟುಕೊಂಡು ಬಂದಿರುವ ಸಮಸ್ಯೆಗಳಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಷಡಕ್ಷರಿ ಸರ್ ರವರಿಗೆ ಕೋಟಿ ಕೋಟಿ ನಮನಗಳು. ಅವರಂತಹ ಪ್ರಾಮಾಣಿಕ ಅಧ್ಯಕ್ಷರು ಇರುವ ತನಕವೂ ನಾವು ಆ ಸಂಘಕ್ಕೆ ಅವರು ತೆಗೆದುಕೊಂಡ ನಿಣ೯ಯಕ್ಕೆ ಬದ್ದರು. ಆದರೆ ಪ್ರಾಮಾಣಿಕ ಲೆಕ್ಕ ಕೊಡದ, ಸಾಲ ಮಾಡುವ, ಸಮ್ಮೇಳನ ಮಾಡಿ ತಮ್ಮ ವೈಯಕ್ತಿಕ ರಾಜಕೀಯ ವಚ೯ಸ್ಸನ್ನು ಬೆಳಿಸಿಕೊಳ್ಳುತ್ತಿರವರು ಇರುವತನಕ ಆ ಸಂಘಟನೆಗೆ ₹ 200/- ಕೊಡಲು ಮನಸಿಲ್ಲ. ಇದು ನನ್ನ ನೀಣ೯ಯ. ನಿಮ್ಮ ನೀಣ೯ಯ ನಿಮಗೆ ಬಿಟ್ಟಿದ್ದು. ಅದನ್ನು ಪ್ರಶ್ನಿಸುವ ಹಕ್ಕು ನನಗಿಲ್ಲ. ಹಣ ಸತತ ಐದು ವಷ೯ ವಂತಿಗೆ ಕೊಟ್ಟವರಿಗೆ ಮತದಾನ ಹಕ್ಕು ಕಸಿದುಕೊಂಡು, ಮೋಸ ಮಾಡಿದ್ದು ಸುಳ್ಳೇ…. ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳುತ್ತಿರುವಾಗ,ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಪ್ರಾಮಾಣಿಕವಾಗಿ ಶಿಕ್ಷಕರ ಸೇವೆ ಮಾಡುತ್ತಿರುವ ಶಿಕ್ಷಕರ ಸೇವಕರಂತಿರುವ ನಾಯಕರು ಇದ್ದಾರೆ.ಸಮಸ್ಯೆಗೆ ಒಂದು ಸಂಘ ಹುಟ್ಟುವಂತಹ ಮಹಾಸಾಧನೆ ಮಾಡಿದ ಬಲಾಡ್ಯ ರಿಗೆ, ಸ್ವಾಭಿಮಾನಿಗಳು ಎಂದು ಹೇಳಿಕೊಂಡು ಅಡ್ಡಾಡುವ ಘನ ನಾಯಕರಿಗೆ ನನ್ನದೊಂದು ವಿಷಾದದ ಮತ್ತು ವಿದಾಯದ ಸಲಾಂ. (ಸಂಘದ ವಿಚಾರದಲ್ಲಿ ಮಾತ್ರ. ವೈಯಕ್ತಿಕವಾಗಿ ನಾವು ನೀವು ಚೆನ್ನಾಗಿರೋಣ) ನಾನು ವ್ಯಕ್ತಪಡಿಸಿದ ಸಂಗತಿಗಳು ಸುಳ್ಳಾದರೆ ಹೇಳಿ. ಎದೆ ತಟ್ಟಿಕೊಂಡು ಹೇಳಿ ನಾವು ತಪ್ಪು ಮಾಡಿಲ್ಲವೆಂದು. ನೀವು ತಪ್ಪು ಮಾಡಿಲ್ಲವಾದರೆ ನಾನು ಕ್ಷಮಾಪಣೆ ಕೇಳುವೆನು. (ಅಧಿಕಾರ ಸಿಕ್ಕಾಗ ಸದುಪಯೋಗ ಮಾಡಿಕೊಳ್ಳದಿದ್ದರೆ ನಂಬಿದವರ ಕೈಗೆ ತೆಂಗಿನಕಾಯಿ ಚಿಪ್ಪು ಗ್ಯಾರಂಟಿ ಅಲ್ಲವಾ???)

ಇಂತಿ ನಿಮ್ಮವನಾದ ಸಿ ಟಿ ತಿಮ್ಮನಗೌಡ್ರ ಸರ್  ಮೊಬೈಲ್ ನಂಬರ್ 8453888587


Spread the love

Leave a Reply

Your email address will not be published. Required fields are marked *

You may have missed