ನೋಡ್ರ್ಯೋ ಯಪ್ಪಾ, ಧಾರವಾಡ ತಾಲೂಕ್ ಪರಿಸ್ಥಿತೀನಾ…!

ಧಾರವಾಡ: ತಾಲೂಕಿನ ಕೋಟೂರ ಗ್ರಾಮದಿಂದ ರೋಗಿಯೊಬ್ಬನನ್ನ ಧಾರವಾಡದ ಸಿವಿಲ್ ಆಸ್ಪತ್ರೆಗೆ ತರುವಾಗ, ಅಂಬ್ಯುಲೆನ್ಸ್ ನಲ್ಲಿ ಆಕ್ಸಿಜನ್ ಆರಂಭಿಸದ ಕಾರಣದಿಂದ ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ ಘಟನೆ ನಡೆದಿದೆ.
ನಡೆದ ಘಟನೆಯ ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ..
ಧಾರವಾಡ ತಾಲೂಕಿನ ಕೋಟೂರ ಗ್ರಾಮದ ಕುತ್ಬುದ್ದೀನ ನನ್ನೇಸಾಬನವರ ಎನ್ನುವವರನ್ನ ಆಸ್ಪತ್ರೆಗೆ ತರುವ ಸಮಯದಲ್ಲಿ ಆಕ್ಸಿಜನ್ ಹಾಕದೇ ಇರುವುದರಿಂದಲೇ ಸಾವಿಗೀಡಾಗಿದ್ದಾನೆಂದು ಕುಟುಂಬಸ್ಥರು, ಆಸ್ಪತ್ರೆ ಆವರಣದಲ್ಲಿ ರೋಧಿಸುತ್ತಿದ್ದ ದೃಶ್ಯಗಳು ಮನಕಲಕುವಂತಿತ್ತು.