ಕಾಂಗ್ರೆಸ್ ಮುಖಂಡ ಸುಭಾಸ ದೇಮಕ್ಕನವರ ಹೃದಯಾಘಾತದಿಂದ ಸಾವು…!

ಹುಬ್ಬಳ್ಳಿ: ತಾಲೂಕಿನ ಸುಳ್ಳ ಗ್ರಾಮದ ಮನೆಯಲ್ಲಿ ಹೃದಯಾಘಾತದಿಂದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುಭಾಸ ದೇಮಕ್ಕನವರ ನಿಧರರಾದರು.

ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೇ ಆದ ವರ್ಚಸ್ಸನ್ನ ಹೊಂದಿದ್ದ, ಸುಭಾಸ ದೇಮಕ್ಕನವರ ಅವರು ನಿನ್ನೆ ನಡೆದ ಮದುವೆಯಲ್ಲಿ ಸಾಕಷ್ಟು ತಿರುಗಾಟ ನಡೆಸಿದ್ದರು. ಆದರೆ, ಇಂದು ತೀವ್ರ ಬಳಲಿದಂತಾಗಿ ಹೃದಯಾಘಾತವಾಗಿದೆ.
ಕಾಂಗ್ರೆಸ್ ಮುಖಂಡ ಸುಭಾಸ ದೇಮಕ್ಕನವರ ಸಾವಿಗೆ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಸಂತಾಪ ಸೂಚಿಸಿದ್ದು, ಕುಟುಂಬದವರಿಗೆ ಸಾಂತ್ವನ ತಿಳಿಸಿದ್ದಾರೆ.