Posts Slider

Karnataka Voice

Latest Kannada News

Spread the love

ಬೆಂಗಳೂರು: ಲಾಕ್ ಡೌನ್ ಇದ್ದರೂ ಕೂಡಾ ಶಾಲೆಗಳಿಗೆ ತೆರಳಬೇಕೆಂದು ಹೇಳಿದ್ದ ಸರಕಾರ, ಇದೀಗ ಶಿಕ್ಷಕಿಯರಿಗೆ ರಿಲೀಫ್ ನೀಡಲು ಮುಂದಾಗಿದೆ. ಆ ಪ್ರಕಾರ ಜೂನ್ 21ರ ವರೆಗೆ ಮನೆಯಲ್ಲಿಯೇ ಇದ್ದು ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದೆ.

ಕೊರೋನಾ ಪ್ರಕರಣಗಳು ಕಡಿಮೆಯಾಗುತ್ತಿದ್ದ ಹಾಗೇ ಜುಲೈ 1ರಿಂದ ಶಾಲೆಗಳನ್ನ ಆರಂಭಿಸಲು ಸರಕಾರ ಮುಂದಾಗಿದೆಯಾದರೂ, ನಿಖರವಾದ ಮಾಹಿತಿಯನ್ನ ಇನ್ನೂ ನೀಡಿಲ್ಲ. ಆದರೆ, 16ರಿಂದ ಶಾಲೆಗೆ ಹೋಗುವಂತೆ ತಿಳಿಸಲಾಗಿತ್ತು.

ಇದೀಗ ಹಲವು ಅನಾನುಕೂಲಗಳು ಕಂಡು ಬಂದ ಹಿನ್ನೆಲೆಯಲ್ಲಿ ಶಿಕ್ಷಕಿಯರಿಗೆ ಕಾಲಾವಕಾಶ ನೀಡಲಾಗಿದೆ. ಸಂಚಾರಕ್ಕೆ ತೊಂದರೆ ಕಡಿಮೆಯಾದ ನಂತರವೇ ಶಿಕ್ಷಕಿಯರಿಗೆ ಅವಕಾಶ ನೀಡುವ ಸಾಧ್ಯತೆಯಿದೆ.


Spread the love

Leave a Reply

Your email address will not be published. Required fields are marked *