ಲಿಂಬುವಾಲೆ ಅಂಗಡಿ ಕಳ್ಳತನ ಮಾಡಿದವ ಹಾಸನದಲ್ಲಿ ಪತ್ತೆ: ಹುಬ್ಬಳ್ಳಿ ಎಪಿಎಂಸಿ ಠಾಣೆ ಪೊಲೀಸರ ಕಾರ್ಯಾಚರಣೆ..

ಹುಬ್ಬಳ್ಳಿ: ಹಾಡುಹಗಲೇ ಎಪಿಎಂಸಿ ಯಾರ್ಡನಲ್ಲಿನ ಸೈಯ್ಯದಸಾಬ ಲಿಂಬುವಾಲೆಯವರ ಮೆಣಸಿನಕಾಯಿ ಅಂಗಡಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನ ಹಾಸನದಲ್ಲಿ ಸುಮಾರು ನಾಲ್ಕು ತಿಂಗಳ ನಂತರ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಲಿಂಬುವಾಲೆ ಅವರ ಅಂಗಡಿಯ ಕ್ಯಾಶ ಕೌಂಟರ್ ಮುರಿದು 4.80000 ರೂಪಾಯಿ ನಗದು ದೋಚಿಕೊಂಡು ಪರಾರಿಯಾಗಿದ್ದ ಮಹ್ಮದ ಇಕ್ಬಾಲ್ ಅಬ್ದುಲಜಬ್ಬರ ಎಂಬಾತನನ್ನ ಬಂಧನ ಮಾಡಲಾಗಿದೆ.
ಬಂಧಿತ ಆರೋಪಿಯಿಂದ 2.80000 ರೂಪಾಯಿ, ಕೃತ್ಯಕ್ಕೆ ಬಳಕೆ ಮಾಡಿಕೊಂಡ ಸ್ವಿಪ್ಟ್ ಕಾರು ಹಾಗೂ ಮೊಬೈಲ್ ನನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣವೂ ಪೆಬ್ರುವರಿ 8ರಂದು ಮಧ್ಯಾಹ್ನವೇ ನಡೆದಿತ್ತು.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಎಪಿಎಂಸಿ ಠಾಣೆ ಇನ್ಸಪೆಕ್ಟರ್ ವಿಶ್ವನಾಥ ಚೌಗಲೆ, ಕೇಶ್ವಾಪುರ ಠಾಣೆ ಇನ್ಸಪೆಕ್ಟರ್ ಜಗದೀಶ ಹಂಚಿನಾಳ, ಸಿಬ್ಬಂದಿಗಳಾದ ಎನ್.ಎಚ್.ಗುಡಿಮನಿ, ಎಂ.ಜೆ,ರಕ್ಕಸಗಿ, ಕೆ.ಕೆ.ಕಾರಬಾರಿ, ಎಸ್.ಎಂ.ದಿಡ್ಡಿ, ಎಂ.ಎಂ.ತಳಗೇರಿ, ಎಸ್.ಎಸ್.ಮೇತ್ರಿ, ಬಿ.ಎನ್.ರಾಠೋಡ, ಕೆ.ಬಿ.ಬೀರನೂರ, ಸಿ.ವೈ.ಬಕ್ಕಸದ, ತಾಂತ್ರಿಕ ಸಿಬ್ಬಂದಿಗಳಾದ ಎಂ.ಎಸ್.ಚಿಕ್ಕಮಠ, ಆರ್.ಕೆ.ಭಂಡಕರ, ರವಿ ಗೋಮಪ್ಪನವರ ಆರೋಪಿಯನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.