ಕೋಟಿ ಒಡೆಯನ ‘ಸಿಂಪ್ಲಿಸಿಟಿ’- ಮನೆ ಮಗನಿಗೆ “ಕೈ ತುತ್ತು” ತಿನ್ನಿಸಿದ ಮಹಿಳೆ…!

ಕಲಘಟಗಿ: ಕ್ಷೇತ್ರದ ಮಾಜಿ ಶಾಸಕ ಸಂತೋಷ ಲಾಡ ಅವರನ್ನ ಕಂಡರೇ, ಇಲ್ಲಿನ ಜನರಿಗೆ ಎಷ್ಟು ಪ್ರೀತಿ ಇದೇಯೋ, ಅಷ್ಟೇ ಅಭಿಮಾನ ಸಂತೋಷ ಲಾಡ ಅವರಿಗೆ ಇದೇ ಎನ್ನುವಂತಹ ಘಟನೆಯೊಂದು ಇಂದು ನಡೆದಿದೆ. ಅದೇನು ಅಂತೀರಾ ಇಲ್ಲಿದೆ ನೋಡಿ..
ಇಡೀ ಕ್ಷೇತ್ರದ ಜನರ ಮನೆ ಮನೆಗೆ ಅಕ್ಕಿಯನ್ನ ಹಂಚುವ ಉತ್ತಮ ಕಾರ್ಯಕ್ಕೆ ಮುಂದಾಗಿರುವ ಮಾಜಿ ಸಚಿವ ಸಂತೋಷ ಲಾಡ್ ಅವರನ್ನ, ಸ್ಥಳೀಯರು ಅತಿಯಾಗಿ ಗೌರವಿಸುತ್ತಾರೆ. ಅಷ್ಟೇ ಅಲ್ಲ, ತಮ್ಮ ಮನೆಯ ಹಿರಿಯ ಮಗನಂತೆ ನೋಡಿಕೊಳ್ಳುತ್ತಾರೆ. ಬೆಳಿಗ್ಗೆಯಿಂದಲೇ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ, ಸಂತೋಷ ಲಾಡ್ ಅವರು ಏನಾದರೂ, ತಿಂದಿದ್ದಾರೋ ಅಥವಾ ಇಲ್ಲವೋ ಎಂಬ ಆತಂಕದಲ್ಲಿದ್ದ ಮಹಿಳೆಯೋರ್ವಳು, ಕೈಯಾರೆ ಅನ್ನವನ್ನ ನೀಡಿ, ಹಸಿವನ್ನಿಂಗಿಸುವುದಕ್ಕೆ ಮುಂದಾದರು.
ಕೋಟಿ ಕೋಟಿ ರೂಪಾಯಿಯ ಒಡೆಯರು ಆಗಿರುವ ಸಂಡೂರಿನ ಧಣಿ ಸಂತೋಷ ಲಾಡ್, ಚೂರು ಹಮ್ಮು ಬಿಮ್ಮು ತೋರಿಸದೇ ಮಹಿಳೆಯ ಕೈತುತ್ತು ಸೇವಿಸಿ, ಅಲ್ಲಿಯೇ ನೀರನ್ನ ಕುಡಿದರು. ಕೊರೋನಾದಂತ ಸಮಯದಲ್ಲೂ, ಕಲಘಟಗಿ ಜನರ ಮೇಲಿನ ಪ್ರೀತಿಗೆ, ಸಂತೋಷ ಲಾಡ್ ಅವರು ಕೊಡುತ್ತಿರುವ ಗೌರವ ಎಂತಹದು ಎಂಬುದು ಇದೊಂದೆ ದೃಶ್ಯ ಹೇಳುವಂತಿತ್ತು…