ಶಿಕ್ಷಕರಿಗೆ ವ್ಯಾಕ್ಸಿನ್: ಏನೂ ಅನ್ನದೇ ಹೊರಟು ಹೋದ ಸಿಎಂ ಯಡಿಯೂರಪ್ಪ…!

ಹುಬ್ಬಳ್ಳಿ: ಜುಲೈ 1ರಿಂದ ಶಾಲೆಗಳನ್ನ ಪ್ರಾರಂಭ ಮಾಡಬೇಕೆಂದು ಆದೇಶ ಬಂದಿದೆ. ಆದರೆ, ಶಿಕ್ಷಕರಿಗೆ ವ್ಯಾಕ್ಸಿನ್ ಹಾಕಿಸಿಯೇ ಇಲ್ಲವೆಂದರೇ, ಸಚಿವ ಸುಧಾಕರ ಅವರು, ಶಾಲೆಗಳು ಪ್ರಾರಂಭವಾಗ್ತಾವಾ ಎಂದು ಮರಳಿ ಪ್ರಶ್ನೆ ಕೇಳುತ್ತಲೇ ತೆರಳಿದ ಘಟನೆ ಹುಬ್ಬಳ್ಳಿಯಲ್ಲಿ ನಡೆಯಿತು.
ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವ್ಯಾಕ್ಸಿನ ಹಾಕಬೇಕಲ್ಲವೇ ಎಂದು ಪ್ರಶ್ನೆ ಕೇಳಿದ ಬೆನ್ನಲ್ಲೇ ಎದ್ದು ಸಿಎಂ ಹೊರಟು ನಿಂತರು. ಶಾಲೆಗಳ ಆರಂಭದ ಬಗ್ಗೆ ಇನ್ನೂ ಮಾಹಿತಿಯೇ ಇಲ್ಲದ ಸಚಿವ ಸುಧಾಕರ ಅವರು, ತಮಗನಿಸಿದ ರೀತಿಯಲ್ಲಿ ಉತ್ತರ ನೀಡಿ ಹೊರನಡೆದರು.
ಸರಕಾರ ಶಿಕ್ಷಕರ ಬಗ್ಗೆ ಎಷ್ಟೊಂದು ಕಾಳಜಿ ಹೊಂದಿದೆ ಎಂಬುದು ಇವತ್ತಿನ ಘಟನೆಯಿಂದ ಗೊತ್ತಾಗಿದ್ದು, ಇಂತಹ ಸ್ಥಿತಿಯಲ್ಲಿಅದೇಗೆ ಶಾಲೆಯನ್ನು ಆರಂಭಿಸುತ್ತಾರೋ ಕಾದು ನೋಡಬೇಕಿದೆ.