ಸಚಿವ ಜಗದೀಶ ಶೆಟ್ಟರರಿಗೆ ದಂಡ ಯಾವಾಗ ವಿಧಿಸುತ್ತೀರಿ: ಕಾನೂನು ಎಲ್ಲರಿಗೂ ಒಂದೇ ಅಲ್ವಾ…!?

ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಅವರಿಗೆ ಎರಡು ಜೋನಲ್ ನಿಂದ ದಂಡ ವಿಧಿಸಿರುವ ಪ್ರಕರಣ ಹೊರಗೆ ಬಂದ ನಂತರ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಅವರಿಗೆ ಯಾವಾಗ ದಂಡ ವಿಧಿಸುವಿರಿ ಎಂದು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವುಕುಮಾರ ಭೇಟಿ ನೀಡಿದ ಸಮಯದಲ್ಲಿ ಕೊರೋನಾ ನಿಯಮಗಳನ್ನ ಉಲ್ಲಂಘನೆ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆ ಜೋನಲ್ ಎಂಟು ಮತ್ತು ಒಂಬತ್ತರಿಂದ 2 ಹಾಗೂ 8 ಸಾವಿರ ರೂಪಾಯಿ ದಂಡವನ್ನ ಹಾಕಿದೆ.
ಆದರೆ, ಜಿಲ್ಲಾ ಉಸ್ತುವಾರಿ ಸಚಿವರು ಸಾಮಾಜಿಕ ಅಂತರ ಮರೆತು ಕಾರ್ಯಕ್ರಮ ನಡೆಸಿರುವ ಭಾವಚಿತ್ರ ಹಾಕಿ, ಪ್ರಶ್ನಿಸಿರುವ ರಜತ ಉಳ್ಳಾಗಡ್ಡಿಮಠ ಅವರು, ಜಗದೀಶ ಶೆಟ್ಟರ ಅವರಿಗೆ ಯಾವಾಗ ದಂಡ ವಿಧಿಸುವಿರಿ ಎಂದು ಪ್ರಶ್ನಿಸಿದ್ದಾರೆ.