ಹೃದಯಾಘಾತದಿಂದ ಹೆಡ್ ಕಾನ್ಸಟೇಬಲ್ ಸಾವು…!

ಯಾದಗಿರಿ: ಕೊರೋನಾ ಲಾಕ್ ಡೌನ್ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಹೆಡ್ ಕಾನ್ಸಟೇಬಲ್ ಸಾವಿಗೀಡಾದ ಘಟನೆ ಕೆಂಭಾವಿ ಗ್ರಾಮದಲ್ಲಿ ಬೆಳಗಿನ ಜಾವ ನಡೆದಿದೆ.

ಕೆಂಭಾವಿ ಠಾಣೆಯ ಹೆಡ್ ಕಾನ್ಸಟೇಬಲ್ ಆಗಿದ್ದ ಚಂದ್ರಶೇಖರ್ ಗೋಗಿ ಮೃತಪಟ್ಟ ಹೆಡ್ ಕಾನ್ಸಟೇಬಲ್ ರಾಗಿದ್ದು, ಯಾದಗಿರಿ ಜಿಲ್ಲೆಯ ಕೆಂಭಾವಿ ಠಾಣೆಯ ಹೆಡ್ ಕಾನ್ಸಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇಂದು ಕರ್ತವ್ಯಕ್ಕೆ ಹಾಜರಾಗಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಹೃಧಯಾಘಾತಕ್ಕೆ ಬಲಿಯಾಗಿದ್ದಾರೆ. ಮೃತದೇಹ ಶಹಾಪುರ ತಾಲೂಕಾಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.