Posts Slider

Karnataka Voice

Latest Kannada News

ಕದ್ದುಮುಚ್ಚಿ ವ್ಯಾಪಾರ ನಡೆಸ್ತಿದ್ದನ್ನ ಪ್ರಶ್ನಿದ್ದಕ್ಕೆ ಹಲ್ಲೆ ಮಾಡಿದ ಅನಿಲ ಡಾಂಗೆ ಮತ್ತು ಮಗ ಪೊಲೀಸ್ ವಶಕ್ಕೆ…!

Spread the love

ಧಾರವಾಡ: ಕೊರೋನಾ ನಿಯಮಗಳನ್ನ ಉಲ್ಲಂಘನೆ ಮಾಡಿ ಹಾರ್ಡವೇರ್ ಅಂಗಡಿಯನ್ನ ತೆಗೆದಿದ್ದನ್ನ ಪ್ರಶ್ನಿಸಿದ ಪೊಲೀಸರ ಮೇಲೆ ಹಲ್ಲೆ ಮಾಡಿರುವ ರೌಡಿ ಷೀಟರ್ ಅನಿಲ ಡಾಂಗೆ ಹಾಗೂ ಆತನ ಪುತ್ರನನ್ನ ವಿದ್ಯಾಗಿರಿ ಠಾಣೆಯ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

ವಿದ್ಯಾಗಿರಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಬಂದೋಬಸ್ತ್ ನಿರ್ವಹಿಸುತ್ತಿದ್ದ ಸಮಯದಲ್ಲಿ ಶ್ರೀ ಸರಸ್ವತಿ ಸೇಲ್ಸ್ ಕಾರ್ಪೋರೇಷನ್ ಅಂಗಡಿಯನ್ನ ತೆಗೆದಿದ್ದರು. ಜಿಲ್ಲಾಡಳಿತ ಇಂತಹ ಅಂಗಡಿಗಳನ್ನ ತೆಗೆಯಬಾರದೆಂದು ಆದೇಶ ಮಾಡಿದೆ.

ಸರಕಾರದ ಆದೇಶವನ್ನ ಪಾಲಿಸುತ್ತಿದ್ದ ಪೊಲೀಸರು ನಿಯಮದ ಪ್ರಕಾರ ವೀಡಿಯೋ ಮಾಡಿಕೊಂಡು ಅಂಗಡಿಯನ್ನ ಬಂದ್ ಮಾಡುವಂತೆ ಸೂಚನೆ ನೀಡಿದ್ದಾರೆ. ಈ ಸಮಯದಲ್ಲಿ ಒಂದು ಕಾಲದ ಮಟಕಾ ದಂಧೆ ನಡೆಸುತ್ತಿದ್ದ ಅನಿಲ ಡಾಂಗೆ ಮತ್ತು ಆತನ ಪುತ್ರ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ವಿಚಾರಣೆ ಮಾಡುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *