Posts Slider

Karnataka Voice

Latest Kannada News

ಪಿಎಸೈ ಸುಖಾನಂದ ಹೊಡೆತ- ಗಾಯಾಳು ಕಿಮ್ಸಗೆ ರವಾನೆ: ಘಟನೆಯ ಬಗ್ಗೆ ಪ್ರಮುಖರು ಮಾತಾಡಿದ್ದಾರೆ…!

Spread the love

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣೆಯ ಪಿಎಸ್ಐ ಸುಖಾನಂದ ಶಿಂಧೆಯಿಂದ ಹೊಡೆತ ತಿಂದಿರುವ ಯುವಕನನ್ನ ಖಾಸಗಿ ಆಸ್ಪತ್ರೆಯಿಂದ ಕಿಮ್ಸಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದ್ದು, ಯುವಕ ನಡೆಯಲಾರದ ಸ್ಥಿತಿಗೆ ತಲುಪಿದ್ದಾನೆ.

ತನ್ನ ಕೆಲಸ ಮುಗಿಸಿಕೊಂಡು ನಿಗದಿತ ಸಮಯಕ್ಕಿಂತ ಮೊದಲೇ ಮನೆಗೆ ತೆರಳುತ್ತಿದ್ದ ಸಮಯದಲ್ಲೇ ಪಿಎಸ್ಐ ಸುಖಾನಂದ ಶಿಂಧೆ, ಅಮಾನವೀಯವಾಗಿ ಹೊಡೆದಿದ್ದಾರೆ. ಇದರಿಂದ ತೀವ್ರವಾಗಿ ರಕ್ತಸ್ರಾವವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸಾಕ್ಷಿಯೂ ಇದೆ ಅಂತಾರೆ ಎಂಐಎಂ ಮುಖಂಡ ನಜೀರ ಹೊನ್ಯಾಳ ಹಾಗೂ ಹಲ್ಲೆಗೊಳಗಾದ ಯುವಕನ ಸಹೋದರ.

ಕರ್ತವ್ಯಕ್ಕೆ ಹಾಜರಾಗಿ ಇನ್ನೂ ಇಂಡಿಪೆಂಡೆಟ್ ಠಾಣೆಯಲ್ಲೂ ಕರ್ತವ್ಯದ ಕನಸು ಕಾಣುತ್ತಿರುವ ಪಿಎಸ್ಐ ಸುಖಾನಂದ ಶಿಂಧೆ, ಮೊದಲಿಂದಲೂ ಜನರೊಂದಿಗೆ ಉತ್ತಮ ರೀತಿಯಲ್ಲಿ ವರ್ತನೆ ಮಾಡುತ್ತಿರಲಿಲ್ಲವೆಂದು ಕೇಳಿ ಬರುತ್ತಿದೆ.

ದಕ್ಷ ಅಧಿಕಾರಿಯಂದೇ ಗುರುತಿಸಿಕೊಂಡಿರುವ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಇಂಥವರ ವಿರುದ್ಧ ಅದ್ಯಾವ ಕ್ರಮವನ್ನ ಜರುಗಿಸುತ್ತಾರೋ ಕಾದು ನೋಡಬೇಕಿದೆ.


Spread the love

Leave a Reply

Your email address will not be published. Required fields are marked *