ಹಳೇಹುಬ್ಬಳ್ಳಿ ಠಾಣೆ ಪಿಎಸ್ಐ ನಿಂದ ಮಾರಣಾಂತಿಕ ಹಲ್ಲೆ: ನಗರದಲ್ಲಿ ಅಮಾನವೀಯ ಘಟನೆ…!

ಹುಬ್ಬಳ್ಳಿ: ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಹಲವು ಬಾರಿ ಹೇಳಿದರೂ, ಹೊಸದಾಗಿ ಡ್ಯೂಟಿಗೆ ಸೇರಿಕೊಂಡಿರುವ ಪಿಎಸ್ಐಗಳು ಸಿನೇಮಾದ ವಿಲನ್ ಸಿಂಗಂ ಆಗಲು ಹೊರಟಿರುವ ಘಟನೆಯೊಂದು ಹಳೇಹುಬ್ಬಳ್ಳಿ ಗುಡಿಹಾಳ ಕ್ರಾಸ್ ಬಳಿಯಲ್ಲಿ ನಡೆದಿದೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸುಖಾನಂದ ಶಿಂಧೆ ಎಂಬುವವರೇ, ರೆಹಮುತ್ತಲ್ಲಾ ಎಂಬಾತನಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದು, ತೀವ್ರವಾದ ರಕ್ತಸ್ರಾವವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಪೊಲೀಸ್ ಕಮೀಷನರ್ ಸಾಕಷ್ಟು ಬಾರಿ ಯಾವುದೇ ಕಾರಣಕ್ಕೂ ಹೊಡೆಯಬಾರದೆಂದು ಹೇಳಿಕೆ ನೀಡಿದ್ದರೂ, ಬಡಿಗೆಯಿಂದ ಹೊಡೆದಿರುವ ಪಿಎಸ್ಐ, ಅಮಾನವೀಯವಾಗಿ ವರ್ತನೆ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.