Posts Slider

Karnataka Voice

Latest Kannada News

ಹೊಸ ಮನ್ವಂತರಕ್ಕೆ ನಾಂದಿ ಹಾಡಿದ ಶಾಸಕ ಶಂಕರ ಪಾಟೀಲಮುನೇನಕೊಪ್ಪ…!

Spread the love

ನವಲಗುಂದ: ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರು ಹೊಸ ಮನ್ವಂತರಕ್ಕೆ ನಾಂದಿ ಹಾಡಿದ್ದು, ಕ್ಷೇತ್ರದ ಪ್ರತಿಯೊಂದು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿಯೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕ್ರಮವನ್ನ ಜರುಗಿಸಲು ಮುಂದಾಗಿದ್ದಾರೆ.

ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿನ ಶಿರೂರ, ಗುಮ್ಮಗೋಳ, ಮೊರಬ, ಶಿರಕೋಳ, ಜಾವೂರ ಹಾಗೂ ಹೆಬ್ಬಾಳ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು, ಪ್ರತಿಯೊಂದನ್ನ ಪರಿಶೀಲನೆ ನಡೆಸಿದರು.

ಪ್ರತಿ ಕಾಳಜಿ ಕೇಂದ್ರದಲ್ಲೂ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ತಹಶೀಲ್ದಾರ, ಪೊಲೀಸ್ ಇನ್ಸಪೆಕ್ಟರ್, ಬಿಈಓ, ಆರೋಗ್ಯ ಅಧಿಕಾರಿ, ಸಿಡಿಪಿಓ, ಎಇಇ, ಆಹಾರ ನಿರೀಕ್ಷಕರು ಸೇರಿದಂತೆ ಪ್ರತಿಯೊಬ್ಬರನ್ನ ಕಡ್ಡಾಯವಾಗಿ ಭಾಗವಹಿಸುವಂತೆ ಶಾಸಕರು ಮಾಡಿದ್ದಾರೆ.

ಕೊರೋನಾ ಪ್ರಕರಣಗಳನ್ನ ಕಡಿಮೆ ಮಾಡುವ ಉದ್ದೇಶದಿಂದ ಪ್ರತಿ ಕಾಳಜಿ ಕೇಂದ್ರದಲ್ಲಿಯೇ ಸಭೆ ನಡೆಸಿ, ಅಲ್ಲಿರುವ ತೊಂದರೆಯನ್ನ ತೊಡೆದು ಹಾಕುತ್ತಿದ್ದಾರೆ. ಅದಕ್ಕೆ ಇಡೀ ತಾಲೂಕಾಡಳಿತವೇ ಕಂಕಣ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ.


Spread the love

Leave a Reply

Your email address will not be published. Required fields are marked *