Posts Slider

Karnataka Voice

Latest Kannada News

ಕೆಎಸ್ಸಾರ್ಟಿಸಿ ನೌಕರರ ಸಂಬಳ ಇನ್ನೂ ಆಗಿಲ್ವಂತೆ…!

Spread the love

ಹುಬ್ಬಳ್ಳಿ: ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕುಟುಂಬಗಳ ನಿರ್ವಹಣೆ ಮಾಡುತ್ತಿರುವುದು ಬಹುತೇಕರಿಗೆ ದುಸ್ತರವಾಗುತ್ತಿದೆ. ಇಂತಹದರಲ್ಲಿ ವಾಯುವ್ಯ ರಸ್ತೆ ಸಾರಿಗೆ ನೌಕರರ ಸಂಬಳವೂ ಆಗದೇ ಇರುವುದು, ಮತ್ತಷ್ಟು ಪರಿಸ್ಥಿತಿಯನ್ನ ಹದಗೆಡಿಸುತ್ತಿದೆ.

ಕಳೆದ ಹಲವು ದಿನಗಳಿಂದ ಲಾಕ್ ಡೌನ್ ನಡೆಯುತ್ತಿದ್ದರೂ ಸಂಬಳ ಮಾತ್ರ ಆಗದೇ ಇರುವುದು ನೌಕರರು ಜೀವನ ನಡೆಸುವುದು ಮತ್ತಷ್ಟು ತೊಂದರೆಯಾಗುತ್ತಿದೆ. ಕೌಟುಂಬಿಕ ಬದುಕು ಸಾಗಿಸುವುದು ದುಸ್ತರವಾಗುತ್ತಿದೆ.

ಕಳೆದ ತಿಂಗಳ ಸಂಬಳ ಬಾರದೇ ಮತ್ತೊಂದು ತಿಂಗಳು ಮುಗಿಯುತ್ತಿದೆ. ಈಗಲೇ ಇಂತಹ ಸ್ಥಿತಿಯಿದ್ದು, ಸರಕಾರ ತಮ್ಮ ಬಗ್ಗೆ ಕಾಳಜಿ ವಹಿಸಬೇಕಿದೆ ಎನ್ನುತ್ತಿದ್ದಾರೆ ಸಾರಿಗೆ ನೌಕರರು.


Spread the love

Leave a Reply

Your email address will not be published. Required fields are marked *