ಹುಬ್ಬಳ್ಳಿ ಬಾಲಾಜಿ ಆಸ್ಪತ್ರೆಯಲ್ಲಿ ಲೈಂಗಿಕ ದೌರ್ಜನ್ಯ…!? ಅಂತಹದೇನು ಆಗಿಲ್ಲವೆಂದ್ರು ಡಾಕ್ಟರ್ ಕ್ರಾಂತಿಕಿರಣ…!

ಹುಬ್ಬಳ್ಳಿ: ನಗರದ ಬಾಲಾಜಿ ಆಸ್ಪತ್ರೆಯಲ್ಲಿ ತನ್ನ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಮಹಿಳೆಯ ಪುತ್ರ ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ ಪ್ರಕರಣ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಬಾಲಾಜಿ ಆಸ್ಪತ್ರೆಯ ಮುಖ್ಯಸ್ಥ ಡಾ.ಕ್ರಾಂತಿಕಿರಣ ಹೇಳಿಕೆ ನೀಡಿದ್ದು, ಇಂತಹದ್ದು ಏನೂ ನಡೆದಿಲ್ಲವೆಂದಿದ್ದಾರೆ.
ಪೂರ್ಣವಾದ ವೀಡಿಯೋ ಇಲ್ಲಿದೆ ನೋಡಿ..
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ 52 ವರ್ಷದ ಮಹಿಳೆಗೆ ಈಗಾಗಲೇ ಪಾರ್ಶವಾಯು ಆಗಿದ್ದು, ಕೊರೋನಾ ಕೂಡಾ ಆಗಿದೆ. ಈ ಸಮಯದಲ್ಲಿ ಮಹಿಳೆಯ ಮೇಲೆ ಡಿ ದರ್ಜೆಯ ನೌಕರ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಪುತ್ರ ಹೇಳುತ್ತಿದ್ದಾನೆ.
ಆದರೆ, ಈ ಬಗ್ಗೆ ಸ್ಪಷ್ಟವಾಗಿ ಮಾತನಾಡಿರುವ ಡಾ.ಕ್ರಾಂತಿಕಿರಣ, ಈ ಬಗ್ಗೆ ಯುವಕ ಸುಳ್ಳು ಹೇಳಿಕೆ ನೀಡುತ್ತಿದ್ದಾನೆ. ನಾವೂ ಎಲ್ಲ ಸಿಸಿಟಿವಿ ಕ್ಯಾಮರಾಗಳನ್ನೂ ಚೆಕ್ ಮಾಡಿದ್ದೇವೆ ಎಂದು ಹೇಳಿದ್ದಾರಲ್ಲದೇ, ಯಾವುದೇ ಕಾರಣಕ್ಕೂ ಅಂತಹ ಘಟನೆ ನಡೆದಿಲ್ಲವೆಂದು ಹೇಳಿದರು.
ಯುವಕ ಮಾತ್ರ ತನ್ನ ತಾಯಿಯ ವೀಡಿಯೋ ಮಾಡಿಯೂ ಮಾಧ್ಯಮಗಳಿಗೆ ಕೊಟ್ಟಿದ್ದು, ಲೈಗಿಂಕ ದೌರ್ಜನ್ಯ ನಡೆದಿದೆ ಎಂದು ಹೇಳುತ್ತಿದ್ದಾನೆ. ಈ ಬಗ್ಗೆ ದೂರು ಪಡೆದಿರುವ ಪೊಲೀಸರೇ ತನಿಖೆ ಮಾಡಿ, ಸತ್ಯವನ್ನ ಹೊರಗೆ ಹಾಕಬೇಕಿದೆ.