ಇಂದು ಮತ್ತೆ ರಿಲೀಫ್ ಕೊರೋನಾ ಕಾರ್ಡ್: ಗುಣಮುಖರಾದವರೇ ಹೆಚ್ಚು..!
1 min readಬೆಂಗಳೂರು: ರಾಜ್ಯದಲ್ಲಿ ಇಂದು ಕೂಡಾ ಕೊರೋನಾದಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದ್ದು, ಸೋಂಕಿತರು 34281 ಆಗಿದ್ದರೇ, ಗುಣಮುಖರಾದವರು 49953 ಆಗಿದ್ದಾರೆ.
ಕೊರೋನಾ ಪ್ರಕರಣಗಳು ಕಡಿಮೆ ಆಗುತ್ತಿರುವುದು ಉತ್ತಮ ವಿಚಾರವೇ ಆಗಿದ್ದು, ಜನರು ಇನ್ನೂ ಜಾಗೃತೆಯಿಂದ ಇರಬೇಕಾದ ಅವಶ್ಯಕತೆಯಿದೆ. ಧಾರವಾಡದಲ್ಲಿ 871 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 582 ಸೋಂಕಿತರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿಂದು ಒಟ್ಟು 468 ಸೋಂಕಿತರು ಸಾವಿಗೀಡಾಗಿದ್ದು, ಧಾರವಾಡ ಜಿಲ್ಲೆಯಲ್ಲಿ 10 ಸೋಂಕಿತರು ಸಾವಿಗೀಡಾಗಿದ್ದಾರೆ. ಬೆಂಗಳೂರಲ್ಲಿ 218 ಜನರು ಸಾವಿಗೀಡಾಗಿರುವುದು ಮಾಹಿತಿಯಿಂದ ಗೊತ್ತಾಗಿದೆ.