ರಸ್ತೆಯಲ್ಲಿರೋ “ಗೇಣುದ್ದ ಹೊಟ್ಟೆ” ತುಂಬಿಸ್ತಿದ್ದಾರೆ- ಹುಬ್ಬಳ್ಳಿ ಗ್ರಾಮೀಣ ಪೊಲೀಸರು…!
1 min readಹುಬ್ಬಳ್ಳಿ: ಲಾಕ್ ಡೌನ್ ಸಮಯದಲ್ಲಿ ಪೊಲೀಸರು ವಾಹನಗಳನ್ನ ತಪಾಸಣೆ ಮಾಡುವುದು, ದಂಡ ಹಾಕುವುದು ಸರ್ವೇ ಸಾಮಾನ್ಯ. ಆದರೆ, ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಹೊಸದೊಂದು ಕಾಯಕಕ್ಕೆ ಮುಂದಾಗಿದ್ದಾರೆ. ಬಸವಳಿದವರ ಹೊಟ್ಟೆಗೆ ಅನ್ನ ನೀಡುತ್ತಿದ್ದಾರೆ.
ಹೌದು.. ಲಾಕ್ ಡೌನ್ ಸಮಯದಲ್ಲಿ ಪೊಲೀಸರು ಪ್ರತಿಯೊಬ್ಬರ ಬಗ್ಗೆ ಕಾಳಜಿಯನ್ನ ಹೊಂದಿರುತ್ತಾರೆಂಬ ಮಾತನ್ನ ಇವರು ಉಳಿಸಿಕೊಳ್ಳುತ್ತಿದ್ದಾರೆ. ದಾರಿಯಲ್ಲಿ ಹೋಗುವ ಪ್ರತಿಯೊಂದು ವಾಹನಗಳನ್ನ ನಿಲ್ಲಿಸಿ, ದಂಡ ಕೇಳದೇ ಊಟವನ್ನ ಕೊಡುತ್ತಿರುವುದು ಪ್ರತಿಯೊಬ್ಬರಲ್ಲೂ ನೆಮ್ಮದಿಯನ್ನ ಮೂಡಿಸಿದೆ.
ಹೆದ್ದಾರಿಗಳಲ್ಲಿ ಬಹುತೇಕ ಅಂಗಡಿಗಳು ಬಂದ್ ಇರುವ ಕಾರಣದಿಂದ ಹಲವರು, ಹಸಿದ ಹೊಟ್ಟೆಯಲ್ಲಿಯೇ ಸಂಚಾರ ಮಾಡುತ್ತಿದ್ದಾರೆ. ಅಂಥವರಿಗೆ ಪೊಲೀಸರು ಸಂಜಿವೀನಿಯಾಗಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ರಮೇಶ ಗೋಕಾಕ ಅವರ ಮಾರ್ಗದರ್ಶನದಲ್ಲಿ ಎಎಸ್ಐ ಡಿ.ಎನ್.ನೀಲಮ್ಮನವರ, ಮಹಾಂತೇಶ, ಚಂದ್ರು, ದೀಪಕ, ಎಚ್.ಎಚ್.ಹರಿಜನ ಕೂಡಿಕೊಂಡು ಮಾನವೀಯ ಕಾರ್ಯವನ್ನ ಮಾಡುತ್ತಿದ್ದಾರೆ. ಇಂಥವರ ಕಾರ್ಯ ಸದಾಕಾಲ ಜನರ ಮನದಲ್ಲಿರತ್ತೆ.. ಥ್ಯಾಂಕ್ಯೂ ಹುಬ್ಬಳ್ಳಿ ಗ್ರಾಮೀಣ ಪೊಲೀಸ್…