ಬ್ಯಾಹಟ್ಟಿಯ ಸರಕಾರಿ ಶಾಲೆಯ ಶಿಕ್ಷಕಿ ಕೊರೋನಾದಿಂದ ಇನ್ನಿಲ್ಲ…!

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕಿ, ಕೊರೋನಾದಿಂದ ಚಿಕಿತ್ಸೆ ಫಲಿಸದೇ ಇಂದು ಸಂಜೆ ಸಾವಿಗೀಡಾಗಿದ್ದಾರೆ.

ಬ್ಯಾಹಟ್ಟಿ ಗ್ರಾಮದ ಉರ್ದು ಶಾಲೆಯ ಶಿಕ್ಷಕಿ ದಿಲಶಾದ ಮುಲ್ಲಾ ಎಂಬುವವರೇ ಸಾವಿಗೀಡಾದ ಶಿಕ್ಷಕಿಯಾಗಿದ್ದು, ಎರಡು ಗಂಡು, ಎರಡು ಹೆಣ್ಣು ಮಕ್ಕಳನ್ನ ಅಗಲಿದ್ದಾರೆ. ಕಳೆದ ಮೂರು ದಿನದಿಂದ ಆರೋಗ್ಯದಲ್ಲಿ ಏರುಪೇರಾಗಿತ್ತು.
ಬ್ಯಾಹಟ್ಟಿ ಗ್ರಾಮದಲ್ಲಿ ಇಬ್ಬರು ಶಿಕ್ಷಕಿಯರು ಕೂಡಿಕೊಂಡು ಶಾಲೆಯನ್ನ ನಡೆಸಿಕೊಂಡು ಹೋಗುತ್ತಿದ್ದರು. ಎಲ್ಲ ವಿದ್ಯಾರ್ಥಿಗಳಿಗೆ ಪ್ರೀತಿಯ ಶಿಕ್ಷಕಿಯಾಗಿದ್ದರು. ಇವರ ಪತಿ ಕೂಡಾ ನಿವೃತ್ತ ರೇಲ್ವೆ ಉದ್ಯೋಗಿಯಾಗಿದ್ದಾರೆ.
ಶಿಕ್ಷಕಿಯ ನಿಧನಕ್ಕೆ ಕರ್ನಾಟಕ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಂತಾಪ ಸೂಚಿಸಿದ್ದು, ಶಿಕ್ಷಕರನ್ನ ಕೊರೋನಾ ವಾರಿಯರ್ ಎಂದು ಘೋಷಿಸಿ, 50ಲಕ್ಷ ಪರಿಹಾರ ಕೊಡುವಂತೆಯೂ ಆಗ್ರಹಿಸಿದ್ದಾರೆ.