Posts Slider

Karnataka Voice

Latest Kannada News

ಮತ್ತೊಂದು ರುಂಡ-ಮುಂಡ ಪ್ರಕರಣ ಬೆಳಕಿಗೆ: ಸತ್ತವರು ಅವನಲ್ಲ… ಆಕೆ…!

Spread the love

ಜಮಖಂಡಿ: ಹುಬ್ಬಳ್ಳಿಯಲ್ಲಿ ನಡೆದ ದುರಂತವೊಂದು ಪತ್ತೆಯಾಗಿ ಪ್ರಕರಣ ಇನ್ನೂ ತನಿಖೆ ನಡೆಯುತ್ತಿರುವ ಸಮಯದಲ್ಲೇ ಜಮಖಂಡಿ ತಾಲೂಕಿನ ಅಲಗೂರ ಗ್ರಾಮದ ಗೌಡರ ಗಡ್ಡಿ ಹತ್ತಿರದ ಶ್ರಮಬಿಂದು ಸಾಗರ ಬ್ಯಾರೇಜ್ ಹಿಂದುಗಡೆಯ ಕೃಷ್ಣಾ ನದಿಯ ನೀರಲ್ಲಿ ಮಹಿಳೆಯೊರ್ವಳ ತುಂಡು ತುಂಡಾದ ದೇಹದ ಭಾಗಗಳು ಸಿಕ್ಕಿದ್ದು, ಪೊಲೀಸರು ಹುಡುಕಾಟ ನಡೆಸಲು ಹರಸಾಹಸ ಪಡುತ್ತಿದ್ದಾರೆ.

ಸುಮಾರು 30ರಿಂದ 35 ವಯಸ್ಸಿನ ಮಹಿಳೆಯ ಎದೆಯ ಭಾಗವನ್ನ ಸೀಳಿ ಹಾಕಲಾಗಿದ್ದು, ಒಂದು ಕೈ ಮಾತ್ರ ದೊರಕಿದೆ. ಇನ್ನುಳಿದ ದೇಹದ ಭಾಗಗಳು ಕೂಡಾ ಪತ್ತೆಯಾಗಿಲ್ಲ.

ಹತ್ಯೆ ಮಾಡಿದ ಮತ್ತು ಹತ್ಯೆಯಾಗಿರುವವರ ಗುರುತು ಸಿಗಬಾರದೆಂಬ ಉದ್ದೇಶದಿಂದ ರಾಕ್ಷಸರಂತೆ ನಡೆದಿರುವ ಕೊಲೆಗೆಡುಕರು ಎಲ್ಲಿಂದ ತಂದು ಹಾಕಿದ್ದಾರೆಂಬುದು ಗೊತ್ತಾಗಿಲ್ಲ.

ಈ ಕುರಿತು ಪೊಲೀಸ್ ಪ್ರಕಟನೆಯನ್ನ ಹೊರಡಿಸಿರುವ ಜಮಖಂಡಿ ಗ್ರಾಮೀಣ ಠಾಣೆಯ ಪೊಲೀಸರು, ಭಾವಚಿತ್ರದಲ್ಲಿ ಕಂಡು ಬರುವ ದೇಹದ ಭಾಗಗಳನ್ನ ಗುರುತಿಸಿ, ಪತ್ತೆಯಾದರೇ ಮಾಹಿತಿ ನೀಡುವಂತೆ ಕೋರಿದ್ದಾರೆ.

ಕರ್ನಾಟಕದಲ್ಲೂ ಎಷ್ಟೊಂದು ಕ್ರೂರಿಗಳು ಹೆಚ್ಚಾಗುತ್ತಿದ್ದಾರೆ ಎಂಬುದಕ್ಕೆ ಮೊನ್ನೆಯ ಹುಬ್ಬಳ್ಳಿಯ ಘಟನೆ ಸಾಕ್ಷಿಯಾಗಿತ್ತು ಎನ್ನುವವರಿಗೆ ಮತ್ತೊಂದು ಘಟನೆ ಬೆಳಕಿಗೆ ಬಂದಿರುವುದು ಆಘಾತ ಮೂಡಿಸದೇ ಇರದು.


Spread the love

Leave a Reply

Your email address will not be published. Required fields are marked *