ನಗೆಗೆ ದಾರಿಯಾಗಿದ್ದ “ಎಂಡಿ ಗೋಗೇರಿ” ಇನ್ನಿಲ್ಲ…!

ಹುಬ್ಬಳ್ಳಿ: ಸಾರಸ್ವತ ಲೋಕದಲ್ಲಿ ಹಾಸ್ಯ ಕವಿಗಳು, ಹಾಸ್ಯ ಪ್ರಬಂಧಕಾರರು, ಹಾಸ್ಯ ಭಾಷಣಕಾರರಂದೆ ಖ್ಯಾತಿ ಪಡೆದಿದ್ದ ಎಂ.ಡಿ.ಗೋಗೇರಿ ಇಂದು ಬೆಳಗಿನ ಜಾವ ಹುಬ್ಬಳ್ಳಿಯ ನವಅಯೋಧ್ಯಾನಗರದ ನಿವಾಸದಲ್ಲಿ ನಿಧನರಾಗಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲೂಕಿನ (ಈಗೀನ ಗಜೇಂದ್ರಗಡ ತಾಲೂಕು) ಗೋಗೇರಿ ಗ್ರಾಮದಲ್ಲಿ 21.01.1942ರಲ್ಲಿ ಜನಿಸಿದ್ದ ಗೋಗೇರಿಯವರು, ದಶಕಗಳಿಂದ ಹುಬ್ಬಳ್ಳಿಯ ನವ ಅಯೋಧ್ಯಾನಗರದ ನಾಲ್ಕನೇ ಕ್ರಾಸ್ ನಲ್ಲಿ ವಾಸಿಸುತ್ತಿದ್ದರು.
30ಕ್ಕೂ ಹೆಚ್ಚು ಗ್ರಂಥಗಳನ್ನ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದರು. ಸುಶ್ರಾವ್ಯವಾಗಿ ಹಾಡುವ ಕಲೆಯನ್ನ ಕರಗತ ಮಾಡಿಕೊಂಡಿದ್ದರು. ಕಳೆದ 35 ವರ್ಷಗಳಿಂದ ಹಾಸ್ಯ ವಿನೋದ ವ್ಯಂಗ್ಯ ವಿಡಂಬನೆಗಳಿಂದ ಲೇಖನಗಳನ್ನ ಬರೆದು ಪ್ರಚಲಿತರಲ್ಲಿದ್ದರು.
ಸಾಹೇಬರು ಸಿಪಾಯಿ, ಪುರುಷ ಶೋಷಣೆ ನಮಸ್ಕಾರ, ಪತ್ನಿಯರ ಸಂದರ್ಶನ ಮುಂತಾದ ಗ್ರಂಥಗಳನ್ನ ಬರೆದಿದ್ದಾರೆ. ಭಾವಸಂಗಮ, ಇದೋ ಕರ್ನಾಟಕ, ತಾಯಿಯ ಉಡಿಯಲ್ಲಿ, ದ್ರಾಕ್ಷಿ ಗೊಂಚಲು, ಚುನಾವಣೆಗೆ ನಿಂತ, ನಾವು ಸರ್ವ ಸ್ವತಂತ್ರರು ಸೇರಿದಂತೆ 13 ಕವನ ಸಂಗ್ರಹಗಳನ್ನ ಪ್ರಕಟಿಸಿದ್ದಾರೆ.
ನಿನಾದ ವಿನೋದ ಇವರ ಸಮಗ್ರ ಕಾವ್ಯ, ಹಳ್ಳಿಯಿಂದ ಹೂಬಳ್ಳಿಗೆ ಇವರ ಆತ್ಮಚರಿತ್ರೆ ಬಂದಿದೆ. ಸೌಹಾರ್ದ ಎಂಬ ಅಭಿನಂದನಾ ಗ್ರಂಥವನ್ನ ಇವರ ಅಭಿಮಾನಿಗಳು ಅರ್ಪಿಸಿದ್ದಾರೆ. ಬಾನುಲಿ ನಾಟಕಗಳಾದ ಹಳ್ಳಿ ಶಿಕ್ಷಕ, ನಿಕ್ಕಿ ಎಷ್ಟು..?, ಯಡವಟ್ಟ ಗಂಡ ಅಡಮುಟ್ಟ ಹೆಂಡತಿ, ಬಾಬ್ ಕಟ್ಟ ಹೆಂಡತಿ ಮುಂತಾದವು ಸಾಕ್ಷಿಯಾಗಿವೆ.