ಮಾಜಿ ಸಚಿವ ಸಂತೋಷ ಲಾಡ ಆಪ್ತ ಸಹಾಯಕ ಹರಿಶಂಕರರಿಗೆ ಕೊರೋನಾ ಪಾಸಿಟಿವ್…!

ಧಾರವಾಡ: ಹಲವು ದಿನಗಳಿಂದ ನಿರಂತರವಾಗಿ ಕಲಘಟಗಿ ಕ್ಷೇತ್ರದಲ್ಲಿ ಅಲೆದಾಟದ ಹಿನ್ನೆಲೆಯಲ್ಲಿ ಅನಾರೋಗ್ಯಗೊಂಡಿದ್ದ ಮಾಜಿ ಸಚಿವ ಸಂತೋಷ ಲಾಡ ಆಪ್ತ ಸಹಾಯಕ ಹರಿಶಂಕರ ಮಠದ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಕಲಘಟಗಿ ಕ್ಷೇತ್ರದಲ್ಲಿ ಜನ ಸಂಪರ್ಕ ಹೊಂದಿರುವ ಹರಿಶಂಕರ ಅವರಿಗೆ ಕಳೆದ ಮೂರು ದಿನದಿಂದ ಆರೋಗ್ಯ ಹದಗೆಟ್ಟಿತ್ತು. ಇದೀಗ ಅವರಿಗೆ ಕೊರೋನಾ ಪಾಸಿಟಿವ್ ಆಗಿದ್ದು, ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಜಿ ಸಚಿವ ಸಂತೋಷ ಲಾಡ ಅವರ ಅಣತಿಯ ಮೇರೆಗೆ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು, ಅದೇ ಕಾರಣಕ್ಕೆ ತೀವ್ರವಾಗಿ ಆಯಾಸಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಕೊರೋನಾ ಟೆಸ್ಟ್ ಮಾಡಿಸಿದ ನಂತರ ಹರಿಶಂಕರ ಅವರಿಗೆ ಕೋವಿಡ್ ದೃಢಪಟ್ಟಿದ್ದು, ಚಿಕಿತ್ಸೆಯನ್ನ ಪಡೆಯುತ್ತಿದ್ದು, ಅವರೊಂದಿಗೆ ಸಂಪರ್ಕಕ್ಕೆ ಬಂದವರು ತಪಾಸಣೆಗೆ ಒಳಪಡುವಂತೆ ಮನವಿ ಮಾಡಿಕೊಂಡಿದ್ದಾರೆ.