ನಾಳೆಯಿಂದ ಕರ್ನಾಟಕದಲ್ಲಿ ಕಠಿಣ ಮಾರ್ಗಸೂಚಿ…!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಳೆಯಿಂದ ಕಠಿಣ ರೂಲ್ಸ್ ಜಾರಿಗೆ ಬರಲಿದ್ದು, ವೀಕೆಂಡ್ ಕರ್ಪ್ಯೂ ಜೊತೆಗೆ ರಾಜ್ಯಾಧ್ಯಂತ ನೈಟ್ ಕರ್ಪ್ಯೂ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ.

ನಾಳೆಯಿಂದ ಶಾಲಾ-ಕಾಲೇಜುಗಳನ್ನ ಬಂದ್ ಮಾಡಲಾಗಿದೆ. ಯಾವುದೇ ರೀತಿಯ ಟ್ಯೂಶನ್ ಸೇರಿದಂತೆ ಎಲ್ಲ ಶಿಕ್ಷಣ ವಿದ್ಯಾಲಯಗಳಿಗೆ 14 ದಿನಗಳವರೆಗೆ ಬಂದ್ ಮಾಡಲು ಸರಕಾರ ಆದೇಶ ಹೊರಡಿಸಿದೆ.

ಬಾರ್ ಗಳು ಯಾವುದೇ ಕಾರಣಕ್ಕೂ ಜನರನ್ನ ಕೂಡಿಸಿ ಕೊಡುವ ಹಾಗಿಲ್ಲ. ಪಾರ್ಸಲ್ ಮೂಲಕ ತೆಗೆದುಕೊಂಡು ಹೋಗಬಹುದು. ಹೊಟೇಲ್, ರೆಸ್ಟೋರೆಂಟ್ ಗಳಲ್ಲಿಯೂ ಕೂಡಾ ಪಾರ್ಸಲ್ ಗೆ ಮಾತ್ರ ಅವಕಾಶ ನೀಡಲಾಗಿದೆ.
ಕಟ್ಟಡ ಕಾಮಗಾರಿಯೂ ಸೇರಿದಂತೆ ಪರರಾಜ್ಯದ ಸರಕು ಸಾಗಣೆಗೆ ಯಾವುದೇ ತೊಂದರೆಯಿಲ್ಲವೆಂದು ಹೇಳಲಾಗಿದ್ದು, ಹಲವು ನಿರ್ಧಾರಗಳನ್ನ ತೆಗೆದುಕೊಳ್ಳಲಾಗಿದೆ.