ದೇಹವನ್ನ ಚೆಂಡಾಡುವ ಮುನ್ನ ಯಾವ ಬಾರ್ ನಲ್ಲಿ ಹಂತಕರು ‘ದಾರೂ’ ಸೇವಿಸಿದ್ರು ಗೊತ್ತಾ..!

ಹುಬ್ಬಳ್ಳಿ: ನಗರದ ಕೇಶ್ವಾಪುರ ಮತ್ತು ದೇವರಗುಡಿಹಾಳದ ಬಳಿ ಸಿಕ್ಕ ದೇಹದ ಹತ್ಯೆಕೋರರನ್ನ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ತನಿಖೆಯನ್ನ ಆರಂಭಿಸಿದ್ದು, ಮತ್ತೆ ಅಚ್ಚರಿಪಡುವಂತ ಸತ್ಯಗಳು ಹೊರ ಬೀಳುತ್ತಿವೆ.

ರಾಕೇಶ ಕಾಟವೆಯನ್ನ ಕೊಲೆ ಮಾಡುವ ಮುನ್ನ ಕೊಲೆಪಾತಕರು ಹಳೇಹುಬ್ಬಳ್ಳಿಯ ಸಂಗಮ ಮತ್ತು ಪ್ರಿಮಿಯಂ ಬಾರ್ ವೊಂದರಲ್ಲಿ ಕಂಠಪೂರ್ತಿ ಮದ್ಯ ಸೇವನೆ ಮಾಡಿಯೇ ಹೊರಟಿದ್ದರು. ಅದನ್ನೇಲ್ಲವನ್ನ ಬಾಯಿಬಿಟ್ಟಿರುವ ಹಂತಕರನ್ನ ಇಂದು ಇನ್ಸಪೆಕ್ಟರ್ ರಮೇಶ ಗೋಕಾಕ ತಂಡ, ಪಂಚನಾಮೆಯನ್ನ ಮಾಡಿತು.

ರಾಕೇಶ ಕಾಟವೆಯ ತಂಗಿಯನ್ನ ಪ್ರೀತಿಸುತ್ತಿದ್ದ ನಿಯಾಜ ಅಹ್ಮದನಿಗೆ ಸಾಥ್ ನೀಡಿದ್ದ ಕಿರಾತಕ ಪಡೆಯಿಂದ ಪ್ರತಿಯೊಂದು ಕ್ಷಣದ ಮಾಹಿತಿಯನ್ನ ಪೊಲೀಸರು ಪಡೆಯುತ್ತಿದ್ದಾರೆ.
ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರ ತನಿಖೆಯ ಬಗ್ಗೆ ಹೆಮ್ಮೆ ಮೂಡಿಸಿದ ಪ್ರಕರಣವಿದು. ಕಿರಾತಕರ ಪ್ರತಿಯೊಂದು ಮಾಹಿತಿಯನ್ನ ಸಂಗ್ರಹಿಸುವ ಮೂಲಕ ಈಗಾಗಲೇ ಹೆಡಮುರಿಗೆ ಕಟ್ಟಲಾಗಿದೆ.