Posts Slider

Karnataka Voice

Latest Kannada News

ಅಸ್ನೋಟಿಕರ ಹತ್ಯೆ ಪ್ರಕರಣ- ಮುಂಬೈ ಶಾರ್ಪ್ ಶೂಟರ್ ಗೆ ಜೀವಾವಧಿ ಶಿಕ್ಷೆ…!

Spread the love

ಉತ್ತರಕನ್ನಡ: ಕಾರವಾರ-ಜೋಯಿಡಾ ಕ್ಷೇತ್ರದ ಶಾಸಕರಾಗಿದ್ದ ವಸಂತ ಅಸ್ನೋಟಿಕರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಮುಂಬೈ ಮೂಲದ ಶಾರ್ಪ್ ಶೂಟರ್ ಸಂಜಯ ಮೋಹಿತೆಗೆ ಜೀವಾವಧಿ ಶಿಕ್ಷೆ ವಿಧಿಸಿ  1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

2000ನೇ ಇಸವಿಯ ಫೆ.19 ರಂದು ಕಾರವಾರದ ದೈವಜ್ಞ ಭವನದ ಎದುರು ಶಾಸಕ ವಸಂತ ಅಸ್ನೋಟಿಕರ್ ಅವರ ಹತ್ಯೆ ನಡೆದಿತ್ತು. ಪ್ರಕರಣದ ಇನ್ನಿತರ ಆರೋಪಿಗಳಾಗಿದ್ದ ದಿಲೀಪ ನಾಯ್ಕ 2004ರಲ್ಲಿ ಹತ್ಯೆ ಆಗಿದ್ದರು. ಉಳಿದ ಆರೋಪಿಗಳಾದ ಬಾಬು, ಅಂತೋನಿ ಮುಂಬೈ ಪೊಲೀಸರ ಎನ್ ಕೌಂಟರ್ ಗೆ ಬಲಿಯಾಗಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಅಪರಾಧ ತನಿಖಾ ದಳ (ಸಿಐಡಿ) ದೋಷಾರೋಪಣ ಪಟ್ಟಿ ಸಲ್ಲಿಸಿತ್ತು.

ವಿಚಾರಣೆ ನಡೆಸಿದ ನ್ಯಾಯಾಧೀಶ ಶಾಂತವೀರ ಶಿವಪ್ಪ ಅಪರಾಧಿಗೆ ಜೀವಾವಧಿ  ಶಿಕ್ಷೆ ಹಾಗೂ ರೂ. 68 ಸಾವಿರ ದಂಡ ಪ್ರಕಟಿಸಿದ್ದಾರೆ.. ಸರ್ಕಾರಿ ಅಭಿಯೋಜಕಿ ಸುನಂದಾ ಮಡಿವಾಳ ವಾದ ಮಂಡಿಸಿದ್ದರು.


Spread the love

Leave a Reply

Your email address will not be published. Required fields are marked *