Posts Slider

Karnataka Voice

Latest Kannada News

ಮಾಜಿ ಮೇಯರ್ ವೀರಣ್ಣ ಸವಡಿ ಮನೆಯಲ್ಲಿ ಕಳ್ಳತನ- ಕೇರ್ ಟೇಕರ್ ನಿಂದ್ಲೆ ವಂಚನೆ…!

Spread the love

ಹುಬ್ಬಳ್ಳಿ: ತಮ್ಮ ತಂದೆಯ ಆರೈಕೆಗಾಗಿ ಕೇರ್ ಟೇಕರ್ ನನ್ನ ನೇಮಕ ಮಾಡಿಕೊಂಡಿದ್ದ ಹುಬ್ಬಳ್ಳಿ ವಿಜಯನಗರದ ಮನೆಯೊಂದರಲ್ಲಿ, ಆರೈಕೆದಾರ ಕಳ್ಳತನ ಮಾಡಿಕೊಂಡು ಪರಾರಿಯಾದ ಘಟನೆ ಸಂಭವಿಸಿದೆ.

ವಿಜಯನಗರದ ನಿವಾಸಿ ಮಾಜಿ ಮೇಯರ್ ವೀರಣ್ಣ ಸವಡಿಯವರ ಮನೆಯಲ್ಲಿಯೇ ಕಳ್ಳತನ ನಡೆದಿದ್ದು, ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರ ಬಡ್ನಿ ತಾಂಡಾದ ಅರುಣ ನಾಯಕ ಎಂಬಾತನೇ ದೋಚಿಕೊಂಡು ಪರಾರಿಯಾಗಿದ್ದಾನೆ.

ವಿಜಯನಗರದಲ್ಲಿನ ಮನೆಯ ಬೆಡ್ ರೂಮಿನ ಕಪಾಟಿನ ಬಾಕ್ಸನಲ್ಲಿದ್ದ 1ಲಕ್ಷ 32 ಸಾವಿರ ರೂಪಾಯಿ ಆಭರಣ ಮತ್ತು 23 ಸಾವಿರ ನಗದು, ಐದು ಸಾವಿರ ಮೌಲ್ಯದ ವಾಚ್ ಗಳನ್ನ ದೋಚಿಕೊಂಡು ಪರಾರಿಯಾಗಿದ್ದಾನೆಂದು ಹುಬ್ಬಳ್ಳಿಯ ಅಶೋಕ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಘಟನೆಯ ಬಗ್ಗೆ ದೂರು ಪಡೆದಿರುವ ಪೊಲೀಸರು ಆರೈಕೆದಾರ ಅರುಣ ನಾಯಕ ಎಂಬಾತನ ಪತ್ತೆಗಾಗಿ ಜಾಲ ಬೀಸಿದ್ದಾರೆ.


Spread the love

Leave a Reply

Your email address will not be published. Required fields are marked *